ಖೇಡಗಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀಭೀರಲಿಂಗೇಶ್ವರ ಜಾತ್ರೆ
Sri Bheeralingeshwara fair held in Khedagi
ಇಂಡಿ 26: ತಾಲ್ಲೂಕಿನ ಭೀಮಾತೀರ ಸಂತ ಮಹಾತ್ಮರಿಗೆ ನೆಚ್ಚಿನ ತಾಣವಾಗಿದೆ, ಹಿಂತಾ ಮಹಿಮಾಂತ್ಮಕರ ಸಾಲಿನಲ್ಲಿ, ಸುಕ್ಷೇತ್ರ ಖೇಡಗಿ ಗ್ರಾಮದಲ್ಲಿ ಶ್ರೀಭೀರಲಿಂಗೇಶ್ವರರು ನೆಲೆನಿಂತು ಕಷ್ಠ ಎಂದು ಬಂದ ಭಕ್ತರಿಗೆ ಉದ್ಧರಿಸಿದ ಮಹಾತ್ಮರಾಗಿದ್ದಾರೆ.
ಇದು ಸುಮಾರು ಎರಡು ನೂರರಿಂದ ಮೂನ್ನುರು ವರ್ಷಗಳ ಹಳೆಯ ದೇವಾಲಯವಾಗಿದೆ. ಈ ಭಾಗದ ಭಕ್ತರು ಜಾತಿ ಮತ ಪಂಥಗಳನ್ನು ಲೇಕಿಸದೆ ಪ್ರತಿವರ್ಷ ಜಾತ್ರೆ ನಡೆಸುತ್ತಿದ್ದಾರೆ. ದಾಸೋಹ, ದೇವರ ಹೇಳಿಕೆಗಳು, ಡೂಳ್ಳಿನ ಹಾಡಿಕೆ ನಡೆಯುತ್ತಿದೆ. ನಾಗರಳ್ಳಿಯ ಲಕ್ಷ್ಮಿದೇವಿಯ ಪಲಕ್ಕಿ ಉಪಸ್ಥಿತಿಯಲ್ಲಿ ಭೀಮಾ ನದಿಯಲ್ಲಿ ಗಂಗಸೀತಾಳ ಮುಗಿಸಿ ನಂತರ ಈರಕಾರ ಕುಣಿತ ಮತ್ತು ದೇವರ ಹೇಳಿಕೆಗಳು ನಡೆಯುವ ಸಾಂಪ್ರಾದಾಯ.ಈ ಜಾತ್ರೆಗೆ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಭೇಟಿ ನೀಡಿ ದರ್ಶನ ಪಡೆದು ಆರ್ಶಿವಾದ ಪಡೆದರು.ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವ್ಹಿ.ಎಚ್.ಬಿದನೂರ, ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಅಣ್ಣಾರಾಯ ಕರನಾಯಕ, ಕಾಶಿನಾಥ್, ಮಡಗೋಂಡ, ಅಮೋಗಿ, ಸೀನೂರ, ದಯಾನಂದ ಬಿದನೂರು ಹಾಗೂ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 