ಶ್ರೀ ಬಲಭೀಮ ದೇವಸ್ಥಾನದ ಜಾತ್ರಮಹೋತ್ಸವ
Sri Balabhima Temple Fair
ಗೋಕಾಕ, 19 : ನಗರದ ಉಪ್ಪಾರ ಓಣಿಯ ಶ್ರೀ ಬಲಭೀಮ(ಮಾರುತಿ) ದೇವಸ್ಥಾನದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ದಿ.20ರಿಂದ 24ರವರೆಗೆ 5 ದಿನಗಳ ಕಾಲ ಅತೀ ವಿಜೃಂಭನೆಯಿಂದ ಜರುಗಲಿದೆ.
ದಿ.20ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಹಾಲಿನ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.21ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಮೊಸರಿನ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.22ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ತುಪ್ಪದ ಅಭಿಷೇಕ ಹಾಗೂ ಶ್ರೀ ಅನಂತಸುಬ್ರಮಣ್ಯ ಜೋಶಿ ಪುರೋಹಿತರಿಂದ ಸುದರ್ಶನ ಹೋಮ ಜರುಗಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ನಗರದ ಸುತ್ತಮುತ್ತಲಿನ ದೇವಸ್ಥಾನಗಳ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.23ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಜೇನುತುಪ್ಪ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 8 ಗಂಟೆಗೆ ಶ್ರೀ ಬಲಭೀಮ ದೇವರ ಪಲ್ಲಕ್ಕಿ ಉತ್ಸವವು ಪ್ರಮುಖ ಬೀದಿಗಳ ಮೂಲಕ ವಾದ್ಯಮೇಳದೊಂದಿಗೆ ಮೆರವಣಿಗೆ ಜರುಗುವುದು. ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ಮಾರುತಿ ಶರಣರು ಇವರಿಂದ ಶ್ರೀ ಹನುಮಂತದೇವರ ಕಥಾ ಎಂಬ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ದಿ.24ರಂದು ಬೆಳಿಗ್ಗೆ ಶ್ರೀಬಲಭೀಮ ದೇವರಿಗೆ ಹಣ್ಣು ಮತ್ತ ಸಕ್ಕರೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 7 ಗಂಟೆಗೆ ಸತ್ಸಂಗ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮಹಾಪ್ರಸಾದ ಸಂಜೆ 6 ಗಂಟೆಗೆ 8 ಗಂಟೆಯವರೆಗೆ ಪೂಜ್ಯ ಶ್ರೀ ವಿಶ್ವಾಧಿರಾಜತೀರ್ಥ ಮಹಾಸ್ವಾಮಿಗಳು ಇವರಿಂದ ಪ್ರವಚನ ಜರುಗುವುದು. ರಾತ್ರಿ 8 ಗಂಟೆಗೆ ಮಹಾಪ್ರಸಾದ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 