ಭಾವೈಕ್ಯತೆ, ತ್ರಿವಿಧ ದಾಸೋಹದ, ಗಟ್ಟಿ ಸ್ಥಳ ಶ್ರೀಕ್ಷೇತ್ರ ಲಚ್ಚ್ಯಾಣ: ಬಿ ಡಿ ಪಾಟೀಲ

ಭಾವೈಕ್ಯತೆ, ತ್ರಿವಿಧ ದಾಸೋಹದ, ಗಟ್ಟಿ ಸ್ಥಳ ಶ್ರೀಕ್ಷೇತ್ರ ಲಚ್ಚ್ಯಾಣ: ಬಿ ಡಿ ಪಾಟೀಲ Spiritual unity, threefold bondage, a strong place, Srikshetra Lachyana: B.D. Patil

ಲೋಕದರ್ಶನ ವರದಿ 

ಇಂಡಿ 10: ಸಿದ್ದಲಿಂಗ ಮಹಾರಾಜರ ಕರ್ತೃತ್ವ ಶಕ್ತಿ ಹಾಗೂ ತಪೋಭೂಮಿಯಲ್ಲಿ ಭೀಮಾ ತೀರ ಜ್ಞಾನ, ಕಲೆ, ಸಾಹಿತ್ಯ ಹಾಗೂ ತ್ರಿವಿಧ ದಾಸೋಹದ ಗಟ್ಟಿ ಸ್ಥಳವಾಗಿ ಪ್ರಸಿದ್ಧಿ ಹೊಂದಿರುವ ಹಾಗೂ ಅಕ್ಷರ ಕ್ರಾಂತಿ ಮಾಡಿದ ಪಾವನ ಕ್ಷೇತ್ರವಾಗಿದೆ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಹೇಳಿದರು. ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಗುರು ಶಂಕರಲಿಂಗರ ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ನಾಟ್ಯ ಸಂಘದ ರಂಗ ಸಾರಥ್ಯದಲ್ಲಿ ನಡೆದ ಸಾಮಾಜಿಕ ನಾಟಕವನ್ನು  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಸಾನಿಧ್ಯವನು ಅಗರಖೇಡದ ಪ್ರಭುಲಿಂಗ ಶ್ರೀಗಳು ವಹಿಸಿದರು. ವೇದಿಕೆ ಮೇಲೆ ಅಶೋಕ ಪಾಟೀಲ, ಶಿವಾನಂದ ದೇವರ, ರಮೇಶ ದಾಯವಾಡಿ, ಶಿವಾನಂದ ಗುರವ, ಮರೇಪ್ಪ ಗಿರಣಿವಡ್ಡರ ಶ್ರೀಶೈಲಗೌಡ ಪಾಟೀಲ್, ರಾಜೇಸಾಬ ನದಾಫ, ಸಿದ್ದು ಡಂಗಾ, ಯಶವಂತ ಬಿರಾದಾರ, ಮಹೇಶ ಭಿಸೆ, ತಾಯಿಚಂದ್ರಕಾಂತ ಬಾಬಳಗಾಂವ, ಮಹಾದೇವ ವಾಲಿಕಾರ, ಎಸ್ ಎಮ್ ಬಿರಾದಾರ, ಭೀಮರಾಯನ ತೇಲಿ, ದುಂಡು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.