ಶಿವಯೋಗೀಶ್ವರ ಜಾತ್ರಾ ಮಹೋತ್ಸವದಲ್ಲಿ ಆಧ್ಯಾತ್ಮಿಕ ಪ್ರವಚನ
Spiritual discourse at the Shiva Yogishwar Jatra festival
ಲೋಕದರ್ಶನ ವರದಿ
ಯರಗಟ್ಟಿ 29: ಮನುಷ್ಯ ಜೀವನದಲ್ಲಿ ಚಿಂತೆಯನ್ನು ಬಿಟ್ಟು ಚಿಂತನ ಮಾಡಬೇಕು ಎಂದು ಹರ್ಲಾಪೂರ ಹರ್ತಿಮಠದ ವೇ.ಮೂರ್ತಿ ಸದಾನಂದ ಶಾಸ್ತ್ರಿಗಳು ಹೇಳಿದರು. ಸಮೀಪದ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ರಥದ ಲೋಕಾರೆ್ಣ, ಆಧ್ಯಾತ್ಮಿಕ ಪ್ರವಚನ, ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಹುಟ್ಟಿನಿಂದ ಚಟ್ಟದವರೆಗೂ ಎಲ್ಲರೂ ಚಿಂತೆಯನ್ನು ಮಾಡುವವರೆ ಮಹಾತ್ಮರ ಚಿಂತೆ ನಮ್ಮನ್ನ ಕಾಯುತ್ತದೆ ಗಂಡ ಹೆಂಡತಿ ಇರುವ ತನಕ ಹೊಂದಾಣಿಕೆಯಿಂದ ಇರಬೇಕು ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಒತ್ತಡ ಜೀವನದಿಂದಾಗಿ ಜನರು ದುಶ್ಚಟಗಳಿಗೆ ದಾಸರಾಗಿ ಅರೋಗ್ಯ ಹಾಳುಮಾಡಿಕೊಳ್ಳುತ್ತಿದ್ದರೆ. ಶರಣರ, ದಾಸರ ವಚನಗಳು, ತತ್ವಪದಗಳನ್ನು ಆಲಿಸಬೇಕು ಎಂದರು. ವೇ.ಮೂ ಚಂದ್ರಯ್ಯ ಹಿರೆಮಠ, ಸಿದ್ದೇಶಕುಮಾರ ಹೊಳಲ, ಮಾಜಿ ಕೆಎಂಎಫ್ ಅಧ್ಯಕ್ಷ ಎಸ್.ಎಸ್.ಮುಗಳಿ, ಮುಖಂಡ ಸಿದ್ದಪ್ಪಾ ನಾಶಿಪೂಡಿ, ಬಸವಣ್ಣೆಪ್ಪ ದೊಡಲಿಂನವರ, ಸಂಗ್ರಾಮ ಗೌಡರ, ಪ್ರದೀಪ ಹಳೇಮನಿ, ಬಸವರಾಜ ಸಣ್ಣಗೌಡ್ರ, ಶಿವಪ್ಪ ಸಣ್ಣಗೌಡ್ರ, ಸಿದ್ದು ಜಗದಾಳೆ ಮತ್ತಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 