ಶಿವಯೋಗೀಶ್ವರ ಜಾತ್ರಾ ಮಹೋತ್ಸವದಲ್ಲಿ ಆಧ್ಯಾತ್ಮಿಕ ಪ್ರವಚನ
Spiritual discourse at the Shiva Yogishwar Jatra festival
ಲೋಕದರ್ಶನ ವರದಿ
ಯರಗಟ್ಟಿ 29: ಮನುಷ್ಯ ಜೀವನದಲ್ಲಿ ಚಿಂತೆಯನ್ನು ಬಿಟ್ಟು ಚಿಂತನ ಮಾಡಬೇಕು ಎಂದು ಹರ್ಲಾಪೂರ ಹರ್ತಿಮಠದ ವೇ.ಮೂರ್ತಿ ಸದಾನಂದ ಶಾಸ್ತ್ರಿಗಳು ಹೇಳಿದರು. ಸಮೀಪದ ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗೀಶ್ವರ ಜಾತ್ರಾ ಮಹೋತ್ಸವ, ರಥದ ಲೋಕಾರೆ್ಣ, ಆಧ್ಯಾತ್ಮಿಕ ಪ್ರವಚನ, ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ಹುಟ್ಟಿನಿಂದ ಚಟ್ಟದವರೆಗೂ ಎಲ್ಲರೂ ಚಿಂತೆಯನ್ನು ಮಾಡುವವರೆ ಮಹಾತ್ಮರ ಚಿಂತೆ ನಮ್ಮನ್ನ ಕಾಯುತ್ತದೆ ಗಂಡ ಹೆಂಡತಿ ಇರುವ ತನಕ ಹೊಂದಾಣಿಕೆಯಿಂದ ಇರಬೇಕು ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಒತ್ತಡ ಜೀವನದಿಂದಾಗಿ ಜನರು ದುಶ್ಚಟಗಳಿಗೆ ದಾಸರಾಗಿ ಅರೋಗ್ಯ ಹಾಳುಮಾಡಿಕೊಳ್ಳುತ್ತಿದ್ದರೆ. ಶರಣರ, ದಾಸರ ವಚನಗಳು, ತತ್ವಪದಗಳನ್ನು ಆಲಿಸಬೇಕು ಎಂದರು. ವೇ.ಮೂ ಚಂದ್ರಯ್ಯ ಹಿರೆಮಠ, ಸಿದ್ದೇಶಕುಮಾರ ಹೊಳಲ, ಮಾಜಿ ಕೆಎಂಎಫ್ ಅಧ್ಯಕ್ಷ ಎಸ್.ಎಸ್.ಮುಗಳಿ, ಮುಖಂಡ ಸಿದ್ದಪ್ಪಾ ನಾಶಿಪೂಡಿ, ಬಸವಣ್ಣೆಪ್ಪ ದೊಡಲಿಂನವರ, ಸಂಗ್ರಾಮ ಗೌಡರ, ಪ್ರದೀಪ ಹಳೇಮನಿ, ಬಸವರಾಜ ಸಣ್ಣಗೌಡ್ರ, ಶಿವಪ್ಪ ಸಣ್ಣಗೌಡ್ರ, ಸಿದ್ದು ಜಗದಾಳೆ ಮತ್ತಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 