ವಿಶೇಷ ಪೂಜೆ ಸಲ್ಲಿಸಿ ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ
Special puja and Udi Filling program for children
ಇಂಡಿ, 30 ; ಹಬ್ಬ ಎನ್ನುವುದು ಅಲಂಕಾರ, ಮೆರವಣಿಗೆಗೆ ಮಾತ್ರವೇ ಸೀಮಿತವಲ್ಲ, ಹಬ್ಬ ನಮ್ಮನ್ನು ಒಗ್ಗೂಡಿಸುತ್ತದೆ. ನಗರದಿಂದ ಗ್ರಾಮ, ಶ್ರೀಮಂತರಿಂದ ಸರಳ ಜೀವಿಯವರೆಗೂ ಕೂಡಿ ಸಂಭ್ರಮಿಸುವುದು ದಸರಾ ಹಬ್ಬದ ವಿಶೇಷತೆ ಎಂದು ನಿರ್ದೇಶಕ ರೇವಣಸಿದ್ಧ ಪೂಜಾರಿ ಹೇಳಿದರು.
ಹೊರ್ತಿ ಸರ್ವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾಡ ದೇವಿಯ 7 ದಿವಸಗಳ ವಿಶೇಷ ಪೂಜೆಗಳು ನಡೆದ 800 ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿ ದಸರಾ ಹಬ್ಬದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಾಮಾಣಿಕತೆ, ಶಿಸ್ತು, ಧೈರ್ಯ, ತ್ಯಾಗ ಹಾಗೂ ಸೇವಾ ಮನೋಭಾವ ಬೆಳೆಸಬಹುದು ಎಂಬ ಉದ್ದೇಶದಿಂದ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಕೂಡಿಕೊಂಡು ಎಲ್ಲಾ ಮುತ್ತೈದೆಯರು ಸೇರಿ 800 ಕ್ಕು ಹೆಚ್ಚು ಹೆಣ್ಣು ಮಕ್ಕಳು ಉಡಿ ತುಂಬಿ ಪ್ರಸಾದ ಹಂಚಿದರು.
ಎಲ್ಲಾ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಭೆಗೆ ಮೆರುಗು ತಂದರು. ಸರ್ವೋದಯ ಸಂಸ್ಥೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಹಾಗು ಬೆಳೆಸುವಲ್ಲಿ ಪ್ರಮುಖ ಪಾತ್ರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ರೇವಣಸಿದ್ದ ಪೂಜಾರಿ, ನಿರ್ದೇಶಕರಾದ ರಮೇಶ್ ಬಲ್ಲಿದ, ರಾಜಶೇಖರ್ ಎಂ, ಲಕ್ಷ್ಮಣ ಕುಸುಮಾ ಹಿಪ್ಪರಗಿ ದೀಪಾ ತೇಲಿ ಅನಿತಾ ಬಲ್ಲಿದ ವೀರೇಶ ಹಿರೇಮಠ. ಎಂ ಎನ್ ಬೀಳಗಿ, ಉಮೇಶ ಮಾವಿನಮರ ಮಹಾದೇವಿ ತಳವಾರ, ಬಸವರಾಜ ಕೋತ ಶ್ರೀಶೈಲ ಜೇವೂರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳು ಭಾಗವಹಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 