ಕನ್ನಡ ಶಾಲೆಯಲ್ಲಿ ಸೈನಿಕನಿಗೆ ಸನ್ಮಾನ
Soldier honored in Kannada school
ಮುಂಡಗೋಡ 19: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಂಡಗೋಡ ಇವರ ವತಿಯಿಂದ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿಯೇ ಕಲಿತ ಕುಮಾರ್ ವಿನಾಯಕ್ ಬಾರ್ಕಿ, ಎಂಬ ಸೈನಿಕನಿಗೆ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕುಮಾರ ವಿನಾಯಕ ಬಾರ್ಕಿ ಎಂಬ ವಿದ್ಯಾರ್ಥಿ 8 ಣ.9 ಣ.10 ಣ. ವಿದ್ಯಾಭ್ಯಾಸ ಮಾಡಿ 2020-21 ನೇ ಸಾಲಿನಲ್ಲಿ ಖಖಐಅ ಪಬ್ಲಿಕ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಪಾಸ್ ಆಗಿ ಈಗ ಭಾರತೀಯ ಶೇನೆಗೆ(ಮಿಲ್ಟ್ರಿಗೆ) ನೇಮಕಾತಿ ಹೊಂದಿ ದೇಶ ಕಾಯುವ ಸೈನಿಕನಾಗಿರುವುದು ನಮಗೆ ಮತ್ತು ನಮ್ಮ ಶಾಲೆಗೆ ಹೆಮ್ಮೆಯ ಮತ್ತು ಸಂತೋಷದ ವಿಷಯ ಆದ್ದರಿಂದ ಅದಿಜಾಂಭವ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಂಡಗೋಡದಲ್ಲಿ ಅಭಿನಂದಿಸಿ ಸನ್ಮಾನ ಮಾಡಿ ವಿನಾಯಕ ಬಾರ್ಕಿ ಇವರು ಭಾರತೀಯ ಸೈನೆಯಲ್ಲಿ ಉತ್ತಮ ಸೇವೆ ಮಾಡಿ ದೇಶಕ್ಕೆ ಮಾದರಿ ಸೈನಿಕನಾಗಲಿ ಅಂತಾ ಗುರು ಹಿರಿಯರು ಹಾಗೂ ಮುಖ್ಯೋಪಾಧ್ಯರು ಅಭಿನಂದಿಸಿದರು.
ಈ ವೇಳೆಗೆ ಎಸ್. ಪಕ್ಕೀರ್ಪ ಮುಂಡಗೋಡ ಅದಿಜಾಂಭವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸೈನಿಕನಿಗೆ ಅಭಿನಂದಿಸಿ ಸನ್ಮಾನ ಮಾಡಿದರು ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಸ್. ಡಿ. ಮುಡೆಣ್ಣವರ, ಆಖಖ ಪದಾಧಿಕಾರಿಗಳಾದ ಪ್ರಭು ಅರಿಸಣಗೇರಿ, ಪ್ಪ ಡಿ. ಮಾದರ ಶಿಗ್ಗಾವಿ, ನೀಲಪ್ಪ ಸವಣೂರ, ಸೋಮೇಶ್ವರ್ ದೈವಜ್ಞ ಭಟರು, ಮತ್ತು ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 