ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯಿಂದ ಸೂರ್ಯಗ್ರಹಣ ವೀಕ್ಷಣೆ
ಧಾರವಾಡ 27: ಪ್ರಕೃತಿಯಲ್ಲಿ ನಡೆಯಲಿರುವ ಅತ್ಯಂತ ಕೌತುಕದ ಅಪರೂಪದ ವಿದ್ಯಮಾನ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಧಾರವಾಡ-ಹುಬ್ಬಳ್ಳಿ ಜನತೆ ನೃಪತುಂಗ, ಮೈಲಾರ ಗುಡ್ಡದಲ್ಲಿ ನೆರೆದಿದ್ದರು.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ವತಿಯಿಂದ ಸೂರ್ಯಗ್ರಹಣ ವೀಕ್ಷಣೆಗೆ ಸುರಕ್ಷಿತ ಕನ್ನಡಕದ ವ್ಯವಸ್ಥೆ ಮಾಡಲಾಗಿತ್ತು. ನೃಪತುಂಗ ಬೆಟ್ಟಕ್ಕೆ ಬೆಳಗ್ಗೆ 7-30ಯಿಂದ ಜನತೆ ಸುರಕ್ಷಿತ ಕನ್ನಡಕ್ಕಗಾಗಿ ಕಾಯುತ್ತಿದ್ದರು. ಗ್ರಹಣ ಬೆಳಗ್ಗೆ 8.05ಕ್ಕೆ ಪ್ರಾರಂಭವಾಗಿ 9.29ಕ್ಕೆ ಗರಿಷ್ಟ ತಲುಪಿ ಬೆಳಗ್ಗೆ 11.11ಕ್ಕೆ ಮುಕ್ತಾಯವಾಯಿತು. ಸುಮಾರು ಶೇಕಡ 85 ರಷ್ಷು ಗ್ರಹಣ ಈ ಭಾಗದಲ್ಲಿ ಗೋಚರಿಸಿತು. 9.15 ರ ವೇಳೆಗೆ ಸೂರ್ಯನನ್ನು ಚಂದ್ರ ಮರೆಮಾಚಿದ್ದರಿಂದ ವಾತಾವರಣ ಮಂಕುಕವಿದಂತಾಗಿತ್ತು.
ನೂರರು ಸಂಖ್ಯೆಯಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸೂರ್ಯಗ್ರಹಣ ವೀಕ್ಷಣೆಗೆ ಬಂದಿದ್ದು ಅವರಲ್ಲಿರುವ ವಿಜ್ಞಾನ ಆಸಕ್ತಿಯನ್ನು ತೋರುತ್ತಿತ್ತು. ಜೆ.ಎಸ್.ಎಸ್ ಕಾಲೇಜಿನ ಪ್ರಾಧ್ಯಾಪಕಿ ಜ್ಯೋತಿ ಅಕ್ಕಿಯವರು ಮಾತನಾಡಿ ಸುರಕ್ಷಿತ ಗ್ರಹಣ ವೀಕ್ಷಣೆ ಬಗ್ಗೆ ವಿವರಿಸಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಜಿಲ್ಲಾ ಸಂಚಾಲಕ ದೀಪರವರು ಉಪಸ್ಥಿತರಿದ್ದರು. ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಕಾರ್ಯಕರ್ತರಾದ ಮಹೇಶ್, ಆನಂದ್, ಹನುಮಂತ್, ಮಾರುತಿ, ರವಿ ಇತರರು ಇದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 