ಶಿಕ್ಷಕ ಜಗದೀಶ ಸಾತಿಹಾಳಗೆ ಸಿದ್ದೇಶ್ವರ ಪ್ರಶಸ್ತಿ ಪ್ರದಾನ
Siddheshwara Award presented to teacher Jagadeesha Satihala
ದೇವರಹಿಪ್ಪರಗಿ 03 : ತಾಲೂಕಿನ ತಿಳಗೂಳ ಗ್ರಾಮದ ಶಿಕ್ಷಕ ಜಗದೀಶ ಸಾತಿಹಾಳ ಅವರಿಗೆ ಸಿದ್ಧೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗೇವಾಡಿ ಪಟ್ಟಣದಲ್ಲಿ ನಡೆದ ಗಾನಯೋಗಿ ಡಾ. ಪಂಚಾಕ್ಷರಿ ಪುಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಕೊಡಮಾಡುವ ಸಿದ್ದೇಶ್ವರ ಪ್ರಶಸ್ತಿಗೆ ಆಯ್ಕೆಯಾಗಿರುವ ಜಗದೀಶ ಸಾತಿಹಾಳ ಅವರಿಗೆ ಗ್ರಾಮದ ಬಸವ ಸೇವಾ ಯುವಕ ಸಮಿತಿಯ ಉಪಾಧ್ಯಕ್ಷರು, ಹಾಗೂ ಉಪನ್ಯಾಸಕರು ಸಂಗನಬಸವ ಪಿಯು ಕಾಲೇಜ ಹಾಗೂ ಎಸ್.ಸಿ. ಉಪ್ಪಿನ್ ಡಿಗ್ರಿ ಕಾಲೇಜ ವಿಜಯಪುರ ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಾಘವೇಂದ್ರ ಉಮ್ಮರಗಿ, ಶಿವಪುತ್ರ ಸಾತಿಹಾಳ, ಮುದಕ್ಕಪ್ಪ ಯಾಳವಾರ, ಬಸಲಿಂಗ ಯಡ್ರಾಮಿ, ಮುತ್ತುರಾಜ ಸಾತಿಹಾಳ, ಶರಣಮ್ಮ ಬಂಡೋಳಿ, ಜಗದೇವಿ ಸಾಹುಕಾರ, ಚೈತ್ರಾ ಸಾತಿಹಾಳ, ಅಕ್ಕಮಹಾದೇವಿ ಬಡೋಳಿ, ಬಸವಶ್ರೀ ಸಾತಿಹಾಳ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಸಮಿತಿಯ ಎಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿ ಮಿತ್ರ, ಸ್ನೇಹಿತ ಬಳಗದವರು ಇದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 