ಸಿದ್ದೇಶ್ವರ ಶ್ರೀಗಳು ಸದ್ಭಾವ ಬಿತ್ತಿದ ಮಹಾನ್ ಸಂತ: ಮಠಪತಿ
Siddeshwara Sri is a great saint who spread goodwill: Mathapati
ಮೂಡಲಗಿ 05: ‘ಸಿದ್ದೇಶ್ವರ ಸ್ವಾಮೀಜಿಗಳು ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಭಕ್ತರ ಮನದಲ್ಲಿ ಸದ್ಭಾವವನ್ನು ಬಿತ್ತಿದ ಮಹಾನ್ ಸಂತರೆನಿಸಿದ್ದರು’ ಎಂದು ಹಾರೂಗೇರಿಯ ಶರಣವಿಚಾರ ವೇದಿಕೆಯ ಅಧ್ಯಕ್ಷ ಐ.ಆರ್. ಮಠಪತಿ ಹೇಳಿದರು.
ಇಲ್ಲಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಲ್ಲಿ ಸಿದ್ದೇಶ್ವರ ಸ್ವಾಮಿಗಳ ತೃತೀಯ ಪುಣ್ಯಸ್ಮರಣೆ ನಿಮಿತ್ಯವಾಗಿ ಏರಿ್ಡಸಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನು ಹೇಳಿದ ಅವರು ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆದು ಜಗತ್ತಿಗೆ ಆದರ್ಶರೆನಿಸಿದರು.
ಜ್ಞಾನ, ದಾಸೋಹ, ಪ್ರಕೃತಿ ಮತ್ತು ಸಮಷ್ಟಿ ಭಾವಪ್ರೇರೆಪಿಸಿದರು. ಪ್ರಶಸ್ತಿ, ಅಧಿಕಾರಗಳಿಂದ ದೂರವಿದ್ದ ಶ್ರೀಗಳ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಸಾನ್ನಿಧ್ಯವಹಿಸಿದ್ದ ಭಾಗೋಜಿಕೊಪ್ಪ ಮುನ್ಯಾಳ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಿದ್ದೇಶ್ವರ ಶ್ರೀಗಳು ಉಪನಿಷತ್ತು, ಪುರಾಣ, ವಚನ, ಪಾಶ್ಚಿಮಾತ್ಯ ದಾರ್ಶನಿಕರ ಸದುವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಜನರಲ್ಲಿ ನೆಲೆತಿಂತ ದುಗುಡಗಳನ್ನು ದೂರ ಮಾಡುತ್ತಿದ್ದರು. ಅವರೊಬ್ಬ ಈ ಯುಗದ ಸಂತ ಎಂದು ಬಣ್ಣಿಸಿದರು.
ಬೆಂಗಳೂರಿನ ವಕೀಲ ಶಿವಶಂಕರ ಬೋಳಜಾಡರ, ಪ್ರೊ.ಸಂಗಮೇಶ ಗುಜಗೊಂಡ, ಹಾರೂಗೇರಿಯ ನಿವೃತ್ತ ಪಾಚಾರ್ಯ ಪ್ರೊ. ಚಂದ್ರಶೇಖರ ಗುಡಸಿ, ಕಸಾಪ ತಾಲ್ಲೂಕು ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಅರುಣ ಬಣಗಾರ, ನಿಪನಾಳದ ಪ್ರಭು ಮಹಾರಾಜರು ಸಿದ್ದೇಶ್ವರ, ಶಿವಪುತ್ರಯ್ಯ ಮಠಪತಿ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಮಹಾಲಕ್ಷ್ಮೀ ಅರ್ಬನ್ ಕೋ. ಆಪ್ ಕ್ರೆಡಿಟ್ ಸೊಸೈಟಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂತೋಷ ಪಾರ್ಶಿ ಮತ್ತು ಮಹಾದೇವ ಗೋಕಾಕ ಅವರನ್ನು ಸನ್ಮಾನಿಸಿದರು.
ಸಂಗಪ್ಪ ಬಾಡಗಿ, ನಿವೃತ್ತ ಪ್ರಾಚಾರ್ಯ ಎಂ.ಕೆ. ಪಾಟೀಲ, ಕೆ.ಟಿ. ಗಾಣಿಗೇರ, ಕೆ.ಬಿ. ಪಾಟೀಲ, ಮುತ್ತಪ್ಪ ಈರ್ಪನ್ನವರ, ವಿಲಾಶ ನಾಶಿ, ಈಶ್ವರ ಸತರಡ್ಡಿ, ಗಿರಿಗೌಡ ಪಾಟೀಲ, ಶಂಕರ ಚಿಪ್ಪಲಕಟ್ಟಿ, ಡಾ. ಸದಾಶಿವ ಮುರಗೋಡ, ಪ್ರೊ. ಬಿ.ಸಿ. ಪಾಟೀಲ, ಡಿ.ಬಿ. ಪಾಟೀಲ ಮತ್ತಿತರು ಉಪಸ್ಥಿತರಿದ್ದರು. ಬಾಲಶೇಖರ ಬಂದಿ ಕಾರ್ಯಕ್ರಮ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 