ಸಮಾಜ ಕಲ್ಯಾಣ ಬಯಸಿದ ಅನುಭವ ಮಂಟಪ ಪ್ರಥಮ ವಿಶ್ವಸಂಸ್ಥೆ
Shravan month program: Bailhongal
ಬೈಲಹೊಂಗಲ 20: ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಕೊನೆಯ ಸೋಮವಾರ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಪ್ರೇಮಕ್ಕ ಅಂಗಡಿ ಜಾತಿ ಮತ ಪಂಥ ಭೇದ ಭಾವವಿಲ್ಲದೆ ಸರ್ವರ ಆತ್ಮ ಹಾಗೂ ಸಮಾಜ ಕಲ್ಯಾಣ ಬಯಸಿದ ಅನುಭವ ಮಂಟಪ ಪ್ರಥಮ ವಿಶ್ವಸಂಸ್ಥೆ ಎಂದು ನುಡಿದರು.
ಅಂಬಿಗರ ಚೌಡಯ್ಯ ಸುಲೋಚನಾ ದಂಪತಿಗಳು ಮಗ ಪುರವಂತ ಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಿದ ಪ್ರವಚನದ ಪ್ರಸಂಗ ವಿವರಿಸಿದರು. ವಿನಾಯಕ ಶೃತಿ ರಾಮಗುಂಡಿ ದಂಪತಿ ಕುಮಾರ್, ವೀವೇಕ ಹವಳಪ್ಪನವರವರನ್ನು ಸಾಕ್ಷಿಕರಿಸಿ ಸನ್ಮಾನಿಸಿ ಬರಮಾಡಿಕೊಂಡ ಪ್ರವಚನ ಎಲ್ಲರ ಕಣ್ಮನ ಸೆಳೆಯಿತು. ಶರಣೆ ವಿದ್ಯಾನಿಲಪ್ಪನವರ್ ವಚನ ಚಿಂತನಗೈದರು. ಅಜಗಣ್ಣ ಮುಕ್ತಾಯಕ್ಕ ಬಳಗ ನಗರದ ನೂರಾರು ಶರಣು ಶರಣೀಯರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕಿ ಮಾಧುರಿ ರಾಮಗುಂಡಿ ಅವರ ವಿದ್ಯಾರ್ಥಿನಿಯರು ವಚನ ನೃತ್ಯ ಪ್ರಸ್ತುತಪಡಿಸಿದರು. ಶೆಟ್ಟನ್ನವರ್ ಬಂಧುಗಳು ದಾಸೋಹಗೈದರು. ಗೀತಾ ಅರಳಿ ಕಟ್ಟಿ ಸ್ವಾಗತಿಸಿದರು. ಸುವರ್ಣ ಬಿಜುಗುಪ್ಪಿ ವಂದಿಸಿದರು. ರಾಜೇಶ್ವರಿ ದ್ಯಾಮನಗೌಡ ನಿರೂಪಿಸಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 