ಗಣೇಶ ಹಬ್ಬದ ಪ್ರಯುಕ್ತ ಗುಂಡು ಎಸೆತ ಸ್ಪರ್ಧೆ
Shot put competition on the occasion of Ganesha festival
ಧಾರವಾಡ, 02 ; ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ ಮತ್ತು ಶ್ರೀ ಜಲದುರಗಮ್ಮ ಅಭಿವೃದ್ಧಿ ಟ್ರಸ್ಟ್ ಕಮೀಟಿಯ ಸಂಯುಕ್ತಾಶ್ರಯದಲ್ಲಿ ರವಿವಾರ ಗುಂಡು ಎಸೆತ ಸ್ಪಧೆೆರ್ಯನ್ನು ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಕಿರಣ ಗಾಣಿಗೇರ ಅವರು ಪ್ರಥಮ ಸ್ಥಾನ ಪಡೆದರು. ರೋಹಿತ ಮೊರಬ, ಬಸವರಾಜ ತರಗಾರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಶ್ರೀ ಜಲದುರಗಮ್ಮ ಅಭಿವೃದ್ಧಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಈಶ್ವರ ಗಾಣೀಗೇರ ಮತ್ತು ಭಾರತ ತಾಲೂಕ ಸೇವಾದಳ ಅಧ್ಯಕ್ಷ ಮಂಜುನಾಥ ತಿರ್ಲಾಪೂರ ಅವರು ವಿಜೇತ ಯುವಕರಿಗೆ ಬಹುಮಾನ ವಿತರಿಸಿದರು.
ಗ್ರಾ.ಪಂ. ಅಧ್ಯಕ್ಷ ಸಂಗಪ್ಪ ಆಯಟ್ಟಿ, ಶ್ರೀ ಶಿವಶಕ್ತಿ ಹವ್ಯಾಸಿ ಯುವಕ ಮಂಡಳ ಅಧ್ಯಕ್ಷ ಶಿವಾನಂದ ಗಾಣಿಗೇರ, ಹಿರಿಯರಾದ ಗೌರ್ಪ ಹುಂಬೇರಿ, ಬಸಪ್ಪ ಬಾರಕೇರ, ಶಂಕರ ನಡುವಿನಮನಿ, ರುದ್ರಗೌಡ ಪಾಟೀಲ, ವಿರುಪಾಕ್ಷ ಹೊಸಕೇರಿ, ಚನ್ನಪ್ಪ ಬಾರಕೇರ, ಮಲ್ಲಪ್ಪ ಹೊಸಕೇರಿ, ಮೂಗಪ್ಪ ವಾಲೀಕಾರ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 