ಕೊಪ್ಪಳದಲ್ಲಿ ಕುರಿಗಾರರ ಕಾರ್ಯಗಾರ: ಪೂರ್ವಭಾವಿ ಸಿದ್ಧತಾ ಸಭೆ
Shepherds' Workshop in Koppal: Preliminary Preparation Meeting
ಕೊಪ್ಪಳ ಮೇ 27, ಬರುವ ತಿಂಗಳ ಜೂನ್ 19ರಂದು ಕೊಪ್ಪಳದಲ್ಲಿ ಕುರಿಗಾರರಿಗೆ ಕುರಿ ಮತ್ತು ಮೇಕೆ ಸಾಗಾಣಿಕೆಯ ಆಧುನಿಕ ತಂತ್ರಜ್ಞಾನ ವ ಮೌಲ್ಯವರ್ಧಿತ ಮಾಂಸ ಉತ್ಪಾದನೆ ಹಾಗೂ ಪ್ರಧಾನ ಮಂತ್ರಿ ಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಸಾಲ ಸೌಲಭ್ಯ ಒದಗಿಸುವ ಕುರಿತು ತರಬೇತಿ ಕಾರ್ಯಗಾರ ನಡೆಸಲು ನಿರ್ಣಯಿಸಲಾಯಿತು.
ಮಂಗಳವಾರ ಕೊಪ್ಪಳದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಸಹಕಾರಿ ಸಂಘ ಹಲಗೇರಿಯ ಅಧ್ಯಕ್ಷರಾದ ಗುಡದಪ್ಪ ಬಾನಪ್ಪನವರ ಹಲಗೇರಿ ಯವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು, ಶೀಘ್ರ ಕೊಪ್ಪಳದಲ್ಲಿ ಇನ್ನೊಮ್ಮೆ ಪೂರ್ವಭಾವಿ ಸಿದ್ಧತಾ ಸಭೆ ಏರಿ್ಡಸಿ ಬಾಳು ಮಾಮ ಕುರಿಗಾಯಿ ಸಂಗೋಪನಾ ಸೇವಾ ಧಾರ್ಮಿಕ ಟ್ರಸ್ಟ್ ಧಾರವಾಡನ ಸಂಪನ್ಮೂಲ ವ್ಯಕ್ತಿ ಡಾ, ಮಹಮ್ಮದ್ ರಫಿಕ ಮೀರಾ ನಾಯಕ್ ರವರ ಉಪಸ್ಥಿತಿ ಮತ್ತು ನೇತೃತ್ವ ದಲ್ಲಿ ಸಭೆ ಸೇರಿ ಮತ್ತೊಮ್ಮೆ ಚರ್ಚಿಸಿ ಕಾರ್ಯಗಾರದ ರೂಪರೇಷಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗುವುದು ಎಂದು ಟ್ರಸ್ಟಿನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಪುರಾಣಿಕ ಮಠ ರವರು ಪ್ರಕಟಿಸಿದರು, ಕುರಿಗಾಹಿಗಳಿಗೆ ಸರಕಾರದಿಂದ ಸಿಗಬಹುದಾದ ಸಹಾಯ ಸೌಕರ್ಯ ಸಾಲ ಇತ್ಯಾದಿ ಯೋಜನೆಗಳ ಲಾಭ ಸಿಗಲು ಕುರಿಗಾರರಿಗೆ ಕಾರ್ಯಗಾರದ ಮೂಲಕ ತರಬೇತಿ ನೀಡಿ ಜಾಗೃತಿಗೊಳಿಸಲಾಗುವುದು ಎಂದು ವಿವರಿಸಿದರು.
ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಗಳಾದ ಅವಿನಾಶ್ ಮತ್ತು ಶಿವಯ್ಯ ಸ್ವಾಮಿ ನವಲಿ ಹಾಗೂ ಕುರಿಗಾಹಿ ಮಾಂತಪ್ಪ ತೋಟದ್ ಮತ್ತು ಈರ್ಪ ಮುದ್ದಾ ಬಳ್ಳಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಅನೇಕರು ಉಪಸಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 