ಶೇಡಬಾಳ:ಕೊಲೆ ಆರೋಪಿ ಬಂಧನ

ಶೇಡಬಾಳ:ಕೊಲೆ ಆರೋಪಿ ಬಂಧನ  Shedabala: Murder suspect arrested

ಕಾಗವಾಡ, 25 ; ತಾಲ್ಲೂಕಿನ ಶೇಡಬಾಳ ಪಟ್ಟಣದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ಅದೆ ಊರಿನ ಶಶಿಕಾಂತ ಕಾಂಬಳೆ ಎನ್ನುವ ವ್ಯಕ್ತಿ ಶವ ಕೊಲೆಯಾದ ಸ್ಥಿತಿಯಲ್ಲಿ ದಿ.20 ರಂದು ಪತ್ತೆಯಾಗಿತ್ತು ಈ ಕುರಿತು ಆತನ ಪುತ್ರ ರಾಹುಲ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.  

ದೂರಿನ ಆದರದಲ್ಲಿ ತನಿಖೆ ಕೈಗೊಂಡ ಕಾಗವಾಡ ಪೋಲಿಸರು ಶೇಡಬಾಳ ಪಟ್ಟಣದ ಪೈಮೂದ್ದಿನ ಮೌಲಾಸಾಬ ಜಮಾದರ (45) ಎಂಬ ವ್ಯಕ್ತಿ ಹಣಕಾಸಿನ ವಿಚಾರವಾಗಿ ಶಶಿಕಾಂತ ಕಾಂಬಳೆಯನ್ನು ಕೊಲೆ ಮಾಡಿರುವುದಾಗಿ ತಪ್ಪೋಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಕೆಲವೆ ದಿನಗಳಲ್ಲಿ ತನಿಖೆ ಮಾಡಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.