ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ
Sharan Culture Festival Program
ಲೋಕದರ್ಶನ ವರದಿ
ಶಿಗ್ಗಾವಿ 24: ಮಠಗಳಲ್ಲಿನ ದಾಸೋಹ ಪರಂಪರೆಯು ಅನ್ನ ಮತ್ತು ಜ್ಞಾನ ನೀಡುವ ಶರಣರ ಸಂಸ್ಕೃತಿಯನ್ನು ಶಿಗ್ಗಾವಿ ವಿರಕ್ತಮಠದಲ್ಲಿಯೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಯಶಸ್ವಿ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಅನ್ನ ದಾಸೋಹವು ಬರುವ ಭಕ್ತರಿಗೆ, ನಿರಂತರ ಉಚಿತ ಆಹಾರ ಒದಗಿಸುವುದಾಗಿದೆ, ಜ್ಞಾನ ದಾಸೋಹವು ಪ್ರವಚನ, ಧಾರ್ಮಿಕ ವಿಚಾರಗಳ ಮೂಲಕ ಜ್ಞಾನಾರ್ಜನೆ ಮಾಡುವುದಾಗಿದೆ, ಮಠಗಳು, ಜನರ ಸೇವೆಗೆ ತಮ್ಮನ್ನು ಸಮರ್ಿಸಿಕೊಳ್ಳಬೇಕು, ಶರಣರ ಕಾಯಕ ಸಂಸ್ಕೃತಿಯು ಈ ಪರಂಪರೆಯ ಮೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿರಕ್ತಮಠದ ಬಸವಲಿಂಗ ದೇವರು, ಈರಣ್ಣ ಅಂಕಲಕೋಟಿ, ಬಸಯ್ಯ ಹಿರೇಮಠ, ರವಿ ವಿರಕ್ತಮಠ, ಸಿ ಡಿ ಯತ್ನಳ್ಳಿ, ವಿಶ್ವನಾಥ ವಾಲಿಶೆಟ್ಟರ, ಯಲ್ಲಪ್ಪ ಸಾಳೋಂಕೆ, ರಾಮಣ್ಣ ಹೊಟ್ಟೂರ, ಡಾ. ಎಂ ಎಂ ತಿರ್ಲಾಪೂರ, ಶಿವಾನಂದ ಮ್ಯಾಗೇರಿ, ನಾಗಪ್ಪ ಬೆಂತೂರ ಸೇರಿದಂತೆ ಮಠದ ಭಕ್ತರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 