ಕವಲೆತ್ತು ಗ್ರಾಮದಲ್ಲಿ ವಿಜೃಂಭಿಸಿದ ಶರಣ ಸಂಸ್ಕೃತಿ ಉತ್ಸವ
Sharan Cultural Festival held in Kavalethu village
.
ರಾಣೇಬೆನ್ನೂರು 10 : ಬಸವಾದಿ ಶರಣರ ಆದರ್ಶ ಗುಣಗಳನ್ನು ಮತ್ತು ಇತಿಹಾಸ ಪುರಾಣ ಪ್ರವಚನಗಳ ಬಗ್ಗೆ ಪೋಷಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಅಂದಾಗ ಮಾತ್ರ ಬಸವ ತತ್ವದ ಪ್ರಚಾರ ಸಾರ್ಥಕವಾಗುತ್ತದೆ ಎಂದು ಕವಲತ್ತು ಗ್ರಾಮದ ಬಸವ ಕೇಂದ್ರದ ಪೀಠಾಧಿಪತಿ ಶರಣೆ ಮುಕ್ತಾಯಕ್ಕ ಹೇಳಿದರು.
ಅವರು ತಾಲೂಕಿನ ಕವಲತ್ತು ಗ್ರಾಮದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ ಶರಣರ ವಚನಗಳನ್ನು ಪಠಣ ಮಾಡುವ ಹವ್ಯಾಸಗಳನ್ನು ಕಲಿಸಬೇಕು.ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಎಂಬ ಗಾದೆ ಮಾತಿನಂತೆ ಗುರು ಹಿರಿಯರಲ್ಲಿ ವಿಶ್ವಾಸ, ಗೌರವ ಮನೋಭಾವನೆ ಮಕ್ಕಳಲ್ಲಿ ಬೆಳೆಯುವ ಹಾಗೆ ಪೋಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಭಕ್ತ ಸಮುದಾಯಕ್ಕೆ ಹೇಳಿದರು.
ಕಾರ್ಯಕ್ರಮದಲ್ಲಿ ಮಹೇಶ್ವರ ಕುಸಗೂರು, ರುದ್ರಮುನಿ ಡಿ, ಮಹೇಶ್ವರಯ್ಯ ಸಿ, ಶ್ರೀಮತಿ ಲಾವಣ್ಯ ಅಂಗಡಿ, ಸಿದ್ದಣ್ಣ ಕೊಡೆರ, ಬಸವರಾಜ್, ಕೊಟ್ರೇಶಪ್ಪ, ನಾಗರಾಜ್, ಶಂಕ್ರಮ್ಮ, ಬಸಮ್ಮ ಹಾಗೂ ಶಾಲಾ ಶಿಕ್ಷಕರು ಸಂಘ ಸಂಸ್ಥೆಯವರು ಸುತ್ತಮುತ್ತಲಿನ ಗ್ರಾಮಸ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 