ರಾಜ್ಯ ಪೆಂಕಾಕ್ ಸಿಲಾಸ್ಕ್ರೀಡಾಕೂಟದಲ್ಲಿ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ

ರಾಜ್ಯ ಪೆಂಕಾಕ್ ಸಿಲಾಸ್ಕ್ರೀಡಾಕೂಟದಲ್ಲಿ ಶಕುಂತಲಾಳಿಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ Shakuntala wins silver, Vikrant wins bronze in state Pencak Silas sports meet

ಮುದ್ದೇಬಿಹಾಳ 30: ಪಟ್ಟಣದ  ಹೊರವಲಯದ ಆಲಿಮಟ್ಟಿ ರಸ್ತೆಯ ಹಡಲಗೇರಿ ಸೀಮೆಯಲ್ಲಿ ಬರುವ  ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಬೆಳ್ಳಿ ಹಾಗೂ ವಿಕ್ರಾಂತ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.  

ಕೊಪ್ಪಳ ಜಿಲ್ಲಾ ಹನುಮಸಾಗರ ಪಟ್ಟಣದ ಶ್ರೀ ಅಭಿನವ ತಿರುಪತಿ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ 11ನೇ  ರಾಜ್ಯ ಪೆಂಕಾಕ್ ಸಿಲಾಸ್ಕ್ರೀಡಾಕೂಟದಲ್ಲಿ ಕ್ರೀಡಾ ಪಟುಗಳಾದ ಶಕುಂತಲಾ ಶಾರದಳ್ಳಿ ಟ್ಯಾಂಡಿಂಗ್ (ಫೈಟ್ )25 ರಿಂದ 30 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ವಿಕ್ರಾಂತ ಶಾರದಳ್ಳಿ ಟ್ಯಾಂಡಿಂಗ್  (ಫೈಟ್ ) 20 ರಿಂದ 25 ಕೆಜಿ  ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ ಎಂದು ತರಬೇತಿದಾರ ಶಿವಕುಮಾರ ಶಾರದಳ್ಳಿ ತಿಳಿಸಿದರು. 

ಇದೇ ಸಂದರ್ಭದಲ್ಲಿ ಟೂರ್ನಿಯ ಆಯೋಜಕರು ಐಪಿಎಸ್ ಎಫ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ , ಐಪಿಎಸ್ ಎಫ್ ಉಪಾಧ್ಯಕ್ಷ ವಿಜಯ ಹಂಚನಾಳ ಸೇರಿ ಟೂರ್ನಿಯಲ್ಲಿ ಉಪಸ್ಥಿತರಿದ್ದ ಮುಖಂಡರ ಸಮ್ಮುಖದಲ್ಲಿ ವಿಜೇತ ಕ್ರೀಡಾ ಪಟುಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರ ವಿತರಿಸಿ ಶುಭಹಾರೈಸಿದರು. ಟೂರ್ನಿಯಲ್ಲಿ ಪದಕ ವಿಜೇತರಾಗಿರುವ  ಶಕುಂತಲಾ ಹಾಗೂ ವಿಕ್ರಾಂತನ ಸಾಧನೆಗೆ ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷರು ಮಾಂತಗೌಡ ಬಿರಾದಾರ್  ಪ್ರಾಚಾರ್ಯರು ಸುಪರ್ಣದಾಸ್ , ಕಾರ್ಯದರ್ಶಿ  ಆದಮ್ಮ ಎಸ್ ಬಿರಾದಾರ.  ಬಿಎಎಸ್ ಟ್ರಸ್ಟ್‌  ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಬಿಎಎಸ್ ಅಂತರಾಷ್ಟ್ರೀಯ ಶಾಲೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು, ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.