ಶಕ್ತಿ ಯೋಜನೆ: ಮಹಿಳೆಯರ ಚಲನವಲನಕ್ಕೆ ಹೊಸ ಶಕ್ತಿ
Shakti Yojana: New energy for women's movement
ಗದಗ 12: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಬದುಕಿನಲ್ಲಿ ಸ್ಪಷ್ಟವಾದ ಬದಲಾವಣೆಯನ್ನು ತರಲು ಕಾರಣವಾಗಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಈ ಯೋಜನೆ, ಕೇವಲ ಸಾರಿಗೆ ಸೌಲಭ್ಯವಷ್ಟೇ ಅಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಶಕ್ತಿ ಯೋಜನೆ ಜಾರಿಯಾದ ನಂತರ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರ ಸಂಚಾರ ಸ್ವಾತಂತ್ರ-್ಯ ಹೆಚ್ಚಾಗಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಸ್ವ-ಉದ್ಯಮಗಳಿಗಾಗಿ ಮಹಿಳೆಯರು ಈಗ ಹೆಚ್ಚು ಆತ್ಮವಿಶ್ವಾಸದಿಂದ ಪ್ರಯಾಣಿಸುತ್ತಿದ್ದಾರೆ. ಹಿಂದೆ ಪ್ರಯಾಣ ವೆಚ್ಚದ ಕಾರಣದಿಂದ ನಿರ್ಬಂಧಿತವಾಗಿದ್ದ ಅನೇಕ ಅವಕಾಶಗಳು ಈಗ ಮಹಿಳೆಯರಿಗೆ ಸುಲಭವಾಗಿ ಲಭ್ಯವಾಗುತ್ತಿವೆ.
ಈ ಯೋಜನೆಯ ದೊಡ್ಡ ಪರಿಣಾಮ ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಕಂಡುಬಂದಿದೆ. ದಿನನಿತ್ಯದ ಪ್ರಯಾಣ ವೆಚ್ಚ ಉಳಿದಿರುವುದರಿಂದ ಕುಟುಂಬಗಳ ಉಳಿತಾಯ ಹೆಚ್ಚಾಗಿದೆ. ವಿಶೇಷವಾಗಿ ಕಾರ್ಮಿಕ ವರ್ಗದ ಮಹಿಳೆಯರಿಗೆ ಇದು ಮಹತ್ತರ ನೆರವಾಗಿದೆ. ಕೆಲಸದ ಸ್ಥಳಗಳಿಗೆ ನಿರಂತರವಾಗಿ ಹೋಗಲು ಸಾಧ್ಯವಾಗುತ್ತಿರುವುದರಿಂದ ಅವರ ಆದಾಯ ಸ್ಥಿರವಾಗಿದೆ.
ಶಕ್ತಿ ಯೋಜನೆ ಮಹಿಳಾ ಶಿಕ್ಷಣಕ್ಕೂ ಉತ್ತೇಜನ ನೀಡಿದೆ. ಕಾಲೇಜು ಮತ್ತು ತರಬೇತಿ ಕೇಂದ್ರಗಳಿಗೆ ಹೋಗುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ದೂರದ ಊರುಗಳಿಂದ ನಗರಗಳಿಗೆ ಶಿಕ್ಷಣಕ್ಕಾಗಿ ಪ್ರಯಾಣಿಸುವ ವಿದ್ಯಾರ್ಥಿನಿಯರಿಗೆ ಈ ಯೋಜನೆ ಆಶಾಕಿರಣವಾಗಿದೆ.
ಸಾಮಾಜಿಕವಾಗಿ ನೋಡಿದರೆ, ಈ ಯೋಜನೆ ಮಹಿಳೆಯರ ಭಾಗವಹಿಸುವಿಕೆಯನ್ನು ಸಾರ್ವಜನಿಕ ಬದುಕಿನಲ್ಲಿ ಹೆಚ್ಚಿಸಿದೆ. ಸ್ವಸಹಾಯ ಸಂಘಗಳು, ಮಾರುಕಟ್ಟೆ ಚಟುವಟಿಕೆಗಳು, ಸರ್ಕಾರಿ ಕಚೇರಿಗಳ ಸಂಪರ್ಕ ಎಲ್ಲವೂ ಸುಲಭವಾಗಿದೆ. ಮಹಿಳೆಯರ ಚಲನವಲನ ಹೆಚ್ಚಿದಂತೆ ಅವರ ಧ್ವನಿ ಮತ್ತು ಹಕ್ಕುಗಳ ಅರಿವು ಕೂಡ ವಿಸ್ತರಿಸಿದೆ.
ಸಾರಿಗೆ ಇಲಾಖೆಯ ದೃಷ್ಟಿಯಿಂದಲೂ ಶಕ್ತಿ ಯೋಜನೆ ಒಂದು ದೊಡ್ಡ ಕಾರ್ಯಾಚರಣೆ. ಹೆಚ್ಚಿದ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಿಸಲು ಬಸ್ಗಳ ಸಂಖ್ಯೆ, ವೇಳಾಪಟ್ಟಿ ಹಾಗೂ ಸೇವಾ ಗುಣಮಟ್ಟವನ್ನು ಸುಧಾರಿಸುವ ಅಗತ್ಯ ಮೂಡಿದೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ.
ಒಟ್ಟಿನಲ್ಲಿ, ಶಕ್ತಿ ಯೋಜನೆ ಕೇವಲ ಉಚಿತ ಪ್ರಯಾಣ ಸೌಲಭ್ಯವಲ್ಲ; ಅದು ಮಹಿಳೆಯರ ಜೀವನಮಟ್ಟವನ್ನು ಸುದಾರಿಸುವ ಸಾಮಾಜಿಕ ಚಳುವಳಿಯಂತಾಗಿದೆ. ಆರ್ಥಿಕ ಉಳಿತಾಯ, ಶಿಕ್ಷಣದ ಅವಕಾಶ, ಉದ್ಯೋಗದ ಪ್ರವೇಶ ಹಾಗೂ ಸ್ವಾವಲಂಬನೆಯ ದಿಕ್ಕಿನಲ್ಲಿ ಈ ಯೋಜನೆ ನಿಜವಾದ ಶಕ್ತಿ ಯಾಗಿ ಪರಿಣಮಿಸಿದೆ. ಮಹಿಳೆಯರ ಸಬಲೀಕರಣವೇ ರಾಜ್ಯದ ಪ್ರಗತಿಯ ಆಧಾರ ಎಂಬುದನ್ನು ಈ ಯೋಜನೆ ಸ್ಪಷ್ಟವಾಗಿ ತೋರಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 