ರೈತರ ಸೇವೆ ಜನಾರ್ಧನ ಸೇವೆ : ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ

ರೈತರ ಸೇವೆ ಜನಾರ್ಧನ ಸೇವೆ : ಎಪಿಎಂಸಿ ಅಧ್ಯಕ್ಷ ದೇವಲ ದೇಸಾಯಿ Serving farmers is serving the people: APMC President Deval Desai

ರಬಕವಿ-ಬನಹಟ್ಟಿ 21: ರೈತರಿಗೆ ಉಪಯೋಗವಾಗುವಂತಹ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಿದ್ದು, ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ರೈತರ ಸೇವೆಯೇ ಜನಾರ್ಧನ ಸೇವೆ ಎಂದು ಮಹಾಲಿಂಗಪುರ ಎಪಿಎಂಸಿ ಅಧ್ಯಕ್ಷ ಹಾಗೂ ಜಿಲ್ಲಾ ಕುಸ್ತಿ ಫೆಡರೇಶನ್ ಅಧ್ಯಕ್ಷ ದೇವಲಸರ್ಕಾರ ದೇಸಾಯಿ ಹೇಳಿದರು. ಅವರು ತಮ್ಮ ಗೃಹ ಕಛೇರಿಯಲ್ಲಿ ಪ್ರಜಾಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಪ್ರಭು ಕೋಪರ್ಡೆ, ನ್ಯಾಯವಾದಿ ಕಿರಣಕುಮಾರ ದೇಸಾಯಿ, ಮಾಧವಾನಂದ ಕೋಪರ್ಡೆ, ಉದಯಕುಮಾರ ದೇಸಾಯಿ ಸೇರಿದಂತೆ ಅನೇಕರಿದ್ದರು.