ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ದಲ್ಲಿ ಸ್ವಯಂ ನೊಂದಣಿಗೆ ಅವಕಾಶ
ಧಾರವಾಡ 28: ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹೊರಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಹತ್ತಿ ಬೆಳದ ರೈತರಿಗೆ ಪ್ರಯೋಜನೆಗಳನ್ನು ಪಡೆಯುವ ಹಿತದೃಷ್ಟಿಯಿಂದ 2025-26 ನೇ ಬೆಳೆ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಮಾರಾಟ ಮಾಡಲು 30/08/2025 ರಿಂದ ಜಾರಿಗೆ ಬರುವಂತೆ ಉಠರರಟಜ ಕಟಥಿ ಖಣಠಜ ಮತ್ತು ಂಠಿಠಿಟಜ ಓಖ ಖಣಠಜ ನಲ್ಲಿ ಲಭ್ಯವಿರುವ “ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ದಲದಲಿ ಸ್ವಯಂ ನೊಂದಣಿಗೆ ಅವಕಾಶ ನೀಡಲಾಗಿದೆ.
ನೊಂದಣಿ ಅವಧಿ ಪ್ರಾರಂಭ ದಿನಾಂಕ: 01/09/2025 ರಿಂದ 31/10/2025 ರವರೆಗೆ ಅನುಸರಿಸಲು ಮೂರು ಸರಳ ಹಂತಗಳು 1) ಕಪಾಸ್ ಕಿಸಾನ್ ಆಪ್ ಡೌನ್ಲೋಡ್ ಮಾಡಿ, 2) ಭೂ ದಾಖಲೆಗಳು, ಕಂದಾಯ ಇಲಾಖೆಯಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಹತ್ತಿ ಬೆಳೆಯ ದಾಖಲೆ, ಮಾನ್ಯ ಆಧಾರ ಕಾರ್ಡ ಮತ್ತು ಫೋಟೋ (ಎಲ್ಲಾ ದಾಖಲಾತಿಗಳನ್ನು ಸಿದ್ದವಾಗಿ ಇಟ್ಟುಕೊಳ್ಳಿ), 3) ನಿರ್ದಿಷ್ಟ ಅವಧಿಯೊಳಗೆ ಸ್ವಯಂ ನೊಂದಣಿಯನ್ನು ಪೂರ್ಣಗೊಳಿಸಲು ಪ್ರಕಟಣೆ ಹೊರಡಿಸಿದ್ದು, ಹಾಗೂ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಖರೀದಿಯನ್ನು 2025 ಅಕ್ಟೋಬರ್ 21 ರಿಂದ ಪ್ರಾರಂಭವಾಗಲಿದೆ ಆದ್ದರಿಂದ ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 