ವೀರಶೈವ, ಪೂರೋಹಿತ ಸಂಘದ ಪದಾಧಿಕಾರಿಗಳ ಆಯ್ಕೆ

ವೀರಶೈವ, ಪೂರೋಹಿತ ಸಂಘದ ಪದಾಧಿಕಾರಿಗಳ ಆಯ್ಕೆ Selection of office bearers of Veerashaiva, Purohita Sangha

ರಾಣಿಬೆನ್ನೂರು 05: ತಾಲೂಕು ವೀರಶೈವ ಜಂಗಮ ಅರ್ಚಕರ ಮತ್ತು ಪೂರೋಹಿತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಸಂಘದ 3ನೇ ವರ್ಷದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಜರುಗಿತು. 

ರಾಚಯ್ಯ ಶಾಸ್ತ್ರಿಗಳು ಹಿರೇಮಠ(ಅಧ್ಯಕ್ಷ), ಶಿವಕುಮಾರ ಶಾಸ್ತ್ರಿಗಳು ಹಿರೇಮಠ(ಉಪಾಧ್ಯಕ್ಷ), ಶರಣಬಸಯ್ಯ ಶಾಸ್ತ್ರಿಗಳು ಹರ್ತಿಮಠ(ಕಾರ್ಯದರ್ಶಿ), ಶರಣಬಸಯ್ಯ ಶಾಸ್ತ್ರಿಗಳು ಹಿರೇಮಠ(ಖಜಾಂಚಿ) ಹಾಗೂ ಕುಮಾರಸ್ವಾಮಿ ಹಿರೇಮಠ(ಸಹಕಾರ್ಯದರ್ಶಿ)ಯಾಗಿ ಆವಿರೋಧವಾಗಿ ಆಯ್ಕೆ ಮಾಡಲಾಯಿತು. 2024-2025ರ ಸಂಘದ ಅಭಿವೃದ್ಧಿಯ  ವಿಚಾರಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಅಧಿಕಾರ ಸ್ಥಾನಗಳನ್ನು ಹಸ್ತಾಂತರಿಸಲಾಯಿತು.