ಕ.ಕಾರ್ಯನಿರತ ಪ್ರರ್ತಕರ್ತರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಕ.ಕಾರ್ಯನಿರತ ಪ್ರರ್ತಕರ್ತರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ Selection of office bearers for the Taluk unit of the working class

ಕಂಪ್ಲಿ 08 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಅತಿಥಿಗೃಹ ಆವರಣದಲ್ಲಿ ಸೋಮವಾರ ನಡೆಯಿತು.ಸಂಘದ ಜಿಲ್ಲಾಧ್ಯಕ್ಷ ಎನ್‌.ವೀರಭದ್ರಗೌಡ ಮಾತನಾಡಿ, ತಾಲೂಕು ಘಟಕಕ್ಕೆ ಬಂಗಿ ದೊಡ್ಡ ಮಂಜುನಾಥ (ಅಧ್ಯಕ್ಷ), ಕರಿ ವಿರುಪಾಕ್ಷಿ(ಉಪಾಧ್ಯಕ್ಷ), ಪಿ.ವೀರೇಶ್(ಪ್ರಧಾನ ಕಾರ್ಯದರ್ಶಿ), ಎಸ್‌.ಯಮನಪ್ಪ(ಕಾರ್ಯದರ್ಶಿ), ಜೀರು ಗಾದಿಲಿಂಗ(ಖಜಾಂಚಿ), ಕಾ.ಕಾ.ಸಮಿತಿ ಸದಸ್ಯರಾಗಿ ಎಂ.ಎಸ್‌.ವಿರೂಪಾಕ್ಷಯ್ಯ, ಸಿ.ವೆಂಕಟೇಶ, ಎಚ್‌.ಎಂ.ಪಂಡಿತಾರಾಧ್ಯ, ಬಿ.ರಸೂಲ್ ಇವರು ಅವಿರೋಧ ಆಯ್ಕೆಗೊಂಡರು ಎಂದು ಪ್ರಕಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ, ಈನಾಡು ತೆಲಗು ಪತ್ರಕರ್ತರಾದ ಎಂ.ಚಂದ್ರಶೇಖರ ಇದ್ದರು.