ಋತುಮಾನ ಆಧಾರಿತ ಬೆಳೆ ಸಮೀಕ್ಷೆ
Seasonal based crop survey
ಲೋಕದರ್ಶನ ವರದಿ
ವಿಜಯಪುರ 16: ರಾಜ್ಯಾದ್ಯಂತ ಸುಮಾರು 23720 ಜನ ಯುವಕ- ಯುವತಿಯರು, ಪ್ರತಿ ವರ್ಷ ಕಂದಾಯ ಹಾಗೂ ಕ್ರುಷಿ ಇಲಾಖೆಗಳ ನಿರ್ದೇಶನದಂತೆ, ಸೀಮಿತ ಅವಧಿಯ ಮೇರೆಗೆ ಋತುಮಾನ ಆಧಾರಿತ ಬೆಳೆ ಸಮೀಕ್ಷೆಗಾರರಾಗಿ
ಕಾರ್ಯ ನಿರ್ವಾಹಿಸುವಾಗ ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತ ಎಂಟು -ಹತ್ತು ವರ್ಷಗಳಿಂದ
ಸೇವೆ ಮಾಡುತ್ತಾ ಬಂದಿದ್ದಾರೆ. ಆದುದರಿಂದ ಜವಾಬ್ದಾರಿಯುತವಾಗಿ ನಿಷ್ಠೆಯಿಂದ ಸತತವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ ಬಂದಿರುವ ಬೆಳೆ ಸಮೀಕ್ಷೆದಾರರ ಸೇವೆಯನ್ನು ಗುರುತಿಸಿ ಮಾಸಿಕ ವೇತನದ ನೀತಿ ಅಡಿಯಲ್ಲಿ ಕಂದಾಯ ಹಾಗೂ ಕ್ರುಷಿ ಇಲಾಖೆಗಳೊಳಗೆ ಅಡಿಠ ಖಣಡಿತಜಥಿಠ ಅಂತ ನೇಮಕ ಮಾಡಿಕೊಳ್ಳಲಿ, ನಮಗಳ ಅವಶ್ಯಕತೆ ಇಲಾಖೆಗಳಿಗೆ ಇದೆ
ಎಂದು ಸಂಘಟನೆಯ ವಿಜಯಪೂರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಭೀಮಪ್ಪ ಲಕ್ಷ್ಮಣ ತಳವಾರ ಅವರು ಜಿಲ್ಲಾ ಘಟಕದಲ್ಲಿ ನಡೆದ ಮಾಸಿಕ ಸಭೆಯಲ್ಲಿ, ನಾವೆಲ್ಲರೂ ಒಗ್ಗಟ್ಟಾಗಿ ಬರುವ ಬೇಸಿಗೆ ಅಧಿವೇಶನ ಕ್ಕಿಂತ ಪೂರ್ವದಲ್ಲಿಯೇ ಸರ್ಕಾರದ ಗಮನಕ್ಕೆ ತರಬೇಕೆಂದು ಪ್ರಕಟಣೆ ವರದಿ ಹೊರಡಿಸಿದರು. ಈ ಒಂದು ಮಾಸಿಕ ಸಭೆಯು ಜಿಲ್ಲಾ ಘಟಕದ ಅಧ್ಯಕ್ಷರು ನರಸಪ್ಪ ನಾವಿ ಅವರ ನೇತೃತ್ವದಲ್ಲಿ ಆಯೋಜನೆ ಗೊಂಡಿದ್ದು ,ಜಿಲ್ಲಾ ಉಪಾಧ್ಯಕ್ಷ ಶ್ರೀ ಸುರೇಶ್ ಸಿಂಗ್ ಹಜೇರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಸದಾಶಿವ ಚಲವಾದಿ ಹಾಗೂ ಜಿಲ್ಲೆಯ ಬೆಳೆ ಸಮೀಕ್ಷೆದಾರರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 