ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ
School anniversary is a good platform for children's talents
ಹೂವಿನಹಡಗಲಿ 01: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಗಳು ಮಕ್ಕಳ ಪ್ರತಿಭೆಯನ್ನು ಹೊರ ತರಲು ಸಹಕಾರಿ. ಶಾಲೆಯಲ್ಲಿನ ಪ್ರತಿ ಪುರಸ್ಕರಿಸುವಂತಹ ಉತ್ತಮ ಕಾರ್ಯ ನಡೆಯುತ್ತಿದೆ ಎಂದು ಸಂಸ್ಥೆ ಗೌರವಾಧ್ಯಕ್ಷ ಹೆಚ್.ಎಂ.ಬೆಟ್ಟಯ್ಯ ಹೇಳಿದರು. ಪಟ್ಟಣದ ಮಲ್ಲಿಗೆ ವಿದ್ಯಾಸಂಸ್ಥೆ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 26ನೇ ಶಾಲಾ ವಾರ್ಷಿಕೋತ್ಸವದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾಭಿವೃದ್ದಿಗೆ ಅನುವಾಗುವಂತೆ ಪೋಷಕರು ಶಿಕ್ಷಕರ ಜತೆ ಒಡನಾಟ ಇಟ್ಟುಕೊಳ್ಳಬೇಕೆಂದರು.ಡಾ.ಉಮರ್ ಮಾತನಾಡಿದರು. ವಿದ್ಯಾಸಂಸ್ಥೆ ಅದ್ಯಕ್ಷ ಕೆ.ಮೆಹಬೂಬ್ ಸುಬಾನ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ದೈಹಿಕ ಶಿಕ್ಷಣ ಪರಿ ವೀಕ್ಷಕ ರಫಿ ಅಹ್ಮದ್ ಖವಾಸ್, ಡಾ. ಉಮರ್, ಮಲ್ಲಿಗೆ ಕಲಾ ಸಂಸ್ಥೆ ಅದ್ಯಕ್ಷ ಎಲ್.ಖಾದರ್ ಬಾಷಾ, ಸಿಆರ್ ಪಿ. ವಿರೇಶ, ಖಲಂದರ್, ಶಿಕ್ಷಕ ಶೇಕ ಅಹ್ಮದ್, ಸಂಸ್ಥೆ ಕಾರ್ಯ ದರ್ಶಿ ಎಲ್.ಅಕ್ಬರ್, ನಿರ್ದೇಶಕ ರಾದಅರಿಪ್ ಬಾನು, ಹಸೀನಾ, ರಹಮಾನ್ ಸಾಬ್ ಇದ್ದರು. ಮು.ಗು. ಪರ್ವಿನ್ ತಾಜ್ ಸ್ವಾಗತಿಸಿದರು. ಶಿಕ್ಷಕಿ ಕೊಟ್ರಮ್ಮ ವಂದಿಸಿದರು. ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆ ಗೊಂಡಿತು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 