ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯ - ಆನಂದ ಪಾಟೀಲ
Satappa Topannavar's struggle is unforgettable - Anand Patil
ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯ - ಆನಂದ ಪಾಟೀಲ
ಯರಗಟ್ಟಿ 10: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಶಿವಾಪುರದ ಸಾತಪ್ಪ ಟೋಪಣ್ಣವರ ಅವರ ಹೋರಾಟ ಅವಿಸ್ಮರಣೀಯವಾದುದು ಎಂದು ಧಾರವಾಡದ ಹಿರಿಯ ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ಹೇಳಿದರು.ಸರಕಾರಿ ಪ್ರೌಢಶಾಲೆಯಲ್ಲಿ ಡಾ. ರಾಜಶೇಖರ ಬಿರಾದಾರ ಅವರು ರಚಿಸಿದ 'ಸಾತಪ್ಪ ಟೋಪಣ್ಣವರ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಸ್ಥಳೀಯ ಹೋರಾಟಗಾರರ ಚರಿತ್ರೆಯನ್ನು ಕೆದಕಿ ಮರುಸೃಷ್ಟಿಸುವುದು ಅಗತ್ಯವಾಗಿದೆ ಎಂದರು.ಪುಸ್ತಕ ಪ್ರಕಟಿಸಿದ ಅಭಿನವ ಪ್ರಕಾಶನದ ರವಿಕುಮಾರ ಅವರು ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ಪಠ್ಯದೊಂದಿಗೆ ನಮ್ಮ ಸುತ್ತಲಿನ ಹೋರಾಟಗಾರರ ಚರಿತ್ರೆಯನ್ನು ಓದಬೇಕು ಎಂದು ಹೇಳಿದರು.ಲೇಖಕ ಡಾ. ರಾಜಶೇಖರ ಬಿರಾದಾರ ಅವರು ಮಾತನಾಡಿ, ಪುಸ್ತಕ ರೂಪುಗೊಂಡ ಬಗೆಯನ್ನು ವಿವರಿಸಿದರು.ಗ್ರಾಮ ಪಂಚಾಯತ ಅಧ್ಯಕ್ಷರಾದ ತವನಪ್ಪ ಟೋಪಣ್ಣವರ, ಪ್ರಗತಿಪರ ರೈತರಾದ ಮಹಾಂತೇಶ ತೋಟಗಿ, ಶಿವಲಿಂಗಯ್ಯ ಮಠಪತಿಯವರು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯ ಪಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದ ಪಾಯಪ್ಪ ಟೋಪಣ್ಣವರ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 