ಸರಸ್ವತಿ ಗಜಕೋಶ, ನಯನ ಓಲೇಕಾರಗೆ ಸನ್ಮಾನ

ಸರಸ್ವತಿ ಗಜಕೋಶ, ನಯನ ಓಲೇಕಾರಗೆ ಸನ್ಮಾನ  Saraswati Gajakosha, Nayana Olekara honored

ಶಿಗ್ಗಾವಿ06 : ಜೀವಿಕ ಜೀವಿತ ವಿಮಕ್ತಿ ಕಟ್ಟಡ ಕಾರ್ಮಿಕ ಸಂಘ, ನಿತ್ಯ ಸತ್ಯ ಕಾರ್ಮಿಕ ಜಾಗೃತಿ ವೇದಿಕೆ ಹಾಗೂ ಸಮತಾ ಸೈನಿಕ ದಳದ ವತಿಯಿಂದ ಭಾರತದ ಹೆಮ್ಮೆಯ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನ್ ರಾಮ್ ಅವರ 119 ನೇ ಜಯಂತಿಯನ್ನು ಆಚರಿಸಲಾಯಿತು.  ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ಹಾಗೂ ರಂಭಾಪುರಿ ಕಾಲೇಜಿನ ವಿದ್ಯಾರ್ಥಿನಿ ಆರ್ಟ್ಸ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕಾಗಿ ನಯನ ಧರ್ಮಪ್ಪ ಓಲೇಕಾರ ಅವರಿಗೆ ಸನ್ಮಾನಿಸಲಾಯಿತು.ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಅಶೋಕ ಕಾಳೆ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಜೈವಿಕ ಜೀವಿತ ಸಂಘದ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಹರಿಜನ್, ಸಂಘದ ಪದಾಧಿಕಾರಿಗಳಾದ ಸತ್ತರು ತಿಳುವಳ್ಳಿ, ಮಲ್ಲಿಕ್ ಜಾನ್ ಬಾಗಲಕೋಟೆ, ಫಕೀರ​‍್ಪ ಕುಂದೂರ, ಆತ್ಮಾನಂದ, ಫಕ್ಕೀರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.