ಅಕ್ಕಿ ಜಿಲಾನ್ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
Sangeet Bhargava award to Akki Jeelan
ಅಕ್ಕಿ ಜಿಲಾನ್ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
ಕಂಪ್ಲಿ 28: ಹೊಸಪೇಟೆ ನಗರದಲ್ಲಿ ಸಂಗೀತ ಭಾರತಿ ಸಂಸ್ಥೆಯಿಂದ ರಕ್ತದಾನ, ಸಮಾಜ ಸೇವೆ ಗುರುತಿಸಿ, ಕಂಪ್ಲಿ ನಿವಾಸಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಯು.ಜಿಲಾನ್ ಇವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅಕ್ಕಿ ಜಿಲಾನ್ ಅವರು ಪ್ರಶಸ್ತಿ ಸ್ವೀಕರಿ ಮಾತನಾಡಿ, ಕಂಪ್ಲಿ ಸೇರಿದಂತೆ ನಾನಾ ಭಾಗದಲ್ಲಿರುವ ಕೆಲ ಬಡವರಿಗೆ ರಕ್ತದಾನ ಮಾಡುವ ಜತೆಗೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಮನಸ್ಸಿಗೆ ನೆಮ್ಮದಿ ತರಿಸಿದೆ. ಈ ಸೇವೆಯನ್ನು ಗುರುತಿಸಿ, ನಮ್ಮನ್ನು ಸಂಗೀತ ಭಾರ್ಗವ ಪ್ರಶಸ್ತಿಗೆ ಆಯ್ಕೆ ಮಾಡಿ, ಪುರಸ್ಕಾರ ನೀಡಿರುವುದು ಸಂತಹ ತಂದಿದೆ. ಎಲೆಮರೆ ಕಾಯಿಯಂತಿರುವ ಸಾಧಕರನ್ನು ಹೊಸಪೇಟೆ ಸಂಗೀತ ಭಾರತಿ ಸಂಸ್ಥೆಯು ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಪ್ರಶಸ್ತಿಯಿಂದ ಇನ್ನಷ್ಟು ಸೇವೆಗಳನ್ನು ಮಾಡಬೇಕೆಂಬ ಹಂಬಲವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಪಿ.ಕಲ್ಲಂಭಟ್, ಪ್ರೊ.ಯು.ರಾಘವೇಂದ್ರರಾವ್, ಹರ್ಷ ಪಂತರ್, ಇಂತಿಯಾಜ್, ಬಳೇ ಮಲ್ಲಿಕಾರ್ಜುನ, ಬಡಿಗೇರ ಜಿಲಾನ್ಸಾಬ್, ಬಿ.ಕೆ.ವಾಸೀಮ್, ಸೈಯ್ಯದ್ ಬುಡೇನ್, ಮರ್ದಾನ್, ಶ್ರೀಕೃಷ್ಣ, ಗಾದಿಲಿಂಗಪ್ಪ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಬಂಗಿ ದೊಡ್ಡ ಮಂಜುನಾಥ ಸೇರಿ ಇತರರಿದ್ದರು. ಜ.002: ಹೊಸಪೇಟೆಯಲ್ಲಿ ಸಮಾಜ ಸೇವೆ ಗುರುತಿಸಿ, ಅಕ್ಕಿ ಜಿಲಾನ್ ಇವರಿಗೆ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 