ಅಕ್ಕಿ ಜಿಲಾನ್ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
Sangeet Bhargava award to Akki Jeelan
ಅಕ್ಕಿ ಜಿಲಾನ್ಗೆ ಸಂಗೀತ ಭಾರ್ಗವ ಪ್ರಶಸ್ತಿ ಪುರಸ್ಕಾರ
ಕಂಪ್ಲಿ 28: ಹೊಸಪೇಟೆ ನಗರದಲ್ಲಿ ಸಂಗೀತ ಭಾರತಿ ಸಂಸ್ಥೆಯಿಂದ ರಕ್ತದಾನ, ಸಮಾಜ ಸೇವೆ ಗುರುತಿಸಿ, ಕಂಪ್ಲಿ ನಿವಾಸಿ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಯು.ಜಿಲಾನ್ ಇವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಅಕ್ಕಿ ಜಿಲಾನ್ ಅವರು ಪ್ರಶಸ್ತಿ ಸ್ವೀಕರಿ ಮಾತನಾಡಿ, ಕಂಪ್ಲಿ ಸೇರಿದಂತೆ ನಾನಾ ಭಾಗದಲ್ಲಿರುವ ಕೆಲ ಬಡವರಿಗೆ ರಕ್ತದಾನ ಮಾಡುವ ಜತೆಗೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಮನಸ್ಸಿಗೆ ನೆಮ್ಮದಿ ತರಿಸಿದೆ. ಈ ಸೇವೆಯನ್ನು ಗುರುತಿಸಿ, ನಮ್ಮನ್ನು ಸಂಗೀತ ಭಾರ್ಗವ ಪ್ರಶಸ್ತಿಗೆ ಆಯ್ಕೆ ಮಾಡಿ, ಪುರಸ್ಕಾರ ನೀಡಿರುವುದು ಸಂತಹ ತಂದಿದೆ. ಎಲೆಮರೆ ಕಾಯಿಯಂತಿರುವ ಸಾಧಕರನ್ನು ಹೊಸಪೇಟೆ ಸಂಗೀತ ಭಾರತಿ ಸಂಸ್ಥೆಯು ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಪ್ರಶಸ್ತಿಯಿಂದ ಇನ್ನಷ್ಟು ಸೇವೆಗಳನ್ನು ಮಾಡಬೇಕೆಂಬ ಹಂಬಲವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಚ್.ಪಿ.ಕಲ್ಲಂಭಟ್, ಪ್ರೊ.ಯು.ರಾಘವೇಂದ್ರರಾವ್, ಹರ್ಷ ಪಂತರ್, ಇಂತಿಯಾಜ್, ಬಳೇ ಮಲ್ಲಿಕಾರ್ಜುನ, ಬಡಿಗೇರ ಜಿಲಾನ್ಸಾಬ್, ಬಿ.ಕೆ.ವಾಸೀಮ್, ಸೈಯ್ಯದ್ ಬುಡೇನ್, ಮರ್ದಾನ್, ಶ್ರೀಕೃಷ್ಣ, ಗಾದಿಲಿಂಗಪ್ಪ, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಎಸ್.ಶಾಮಸುಂದರರಾವ್, ಬಂಗಿ ದೊಡ್ಡ ಮಂಜುನಾಥ ಸೇರಿ ಇತರರಿದ್ದರು. ಜ.002: ಹೊಸಪೇಟೆಯಲ್ಲಿ ಸಮಾಜ ಸೇವೆ ಗುರುತಿಸಿ, ಅಕ್ಕಿ ಜಿಲಾನ್ ಇವರಿಗೆ ಸಂಗೀತ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 