ಕೋಚ್ ಗಳಿಗೆ ಸಾಯ್ ಆಯೋಜಿಸಿರುವ 21 ದಿನಗಳ ಆನ್ ಲೈನ್ ಕಾರ್ಯಗಾರ ಆರಂಭ
ನವದೆಹಲಿ, ಏ 16,ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್ ಎಸ್ ಎಫ್)ಗಳ ಸಹಭಾಗಿತ್ವದಲ್ಲಿ ಕೋಚ್ ಗಳಿಗಾಗಿ ಗುರುವಾರದಿಂದ ಆಯೋಜಿಸಿರುವ 21 ದಿನಗಳ ದೀರ್ಘಾವಧಿಯ ಆನ್ ಲೈನ್ ಕಾರ್ಯಗಾರದ ಮೊದಲ ಅಧಿವೇಶನದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪಾಲ್ಗೊಂಡಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಸಂಜೀವ ಸಿಂಗ್ ನಡೆಸಿಕೊಟ್ಟ ಮೊದಲ ದಿನದ ಅಧಿವೇಶನದಲ್ಲಿ ರಿಜಿಜು, ಅಲ್ಲದೆ, ಕೇಂದ್ರ ಸಚಿವ ಹಾಗೂ ಭಾರತೀಯ ಆರ್ಚರಿ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಮುಂಡ ಸಹ ಪಾಲ್ಗೊಂಡಿದ್ದರು. ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಿಜಿದು ಕಚೇರಿ, '' ಕೋಚ್ ಗಳಿಗಾಗಿ 21 ದಿನಗಳ ಕಾಲ ಆನ್ ಲೈನ್ ಕಾರ್ಯಗಾರವನ್ನು ಇಂದು (ಗುರುವಾರ) ಆರಂಭಿಸಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸಂಜೀವ ಸಿಂಗ್ ನಡೆಸಿಕೊಟ್ಟ ಈ ಅಧಿವೇಶನದಲ್ಲಿ ಕಿರಣ್ ರಿಜಿಜು ಮತ್ತು ಅರ್ಜುನ್ ಮುಂಡ ಪಾಲ್ಗೊಂಡಿದ್ದರು. ಸಾಯ್ ಮತ್ತು ಎನ್ ಎಸ್ ಎಫ್ ವತಿಯಿಂದ ಕೋಚ್ ಗಳ ಜ್ಞಾನ ಉನ್ನತೀಕರಣಕ್ಕೆ ಕೈಗೊಂಡ ಮೊದಲ ಆನ್ ಲೈನ್ ಉಪಕ್ರಮ ಇದಾಗಿದೆ,'' ಎಂದು ಹೇಳಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 