"ಸದ್ಗುರುವಿಗೆ ಕಾವ್ಯದಿಂಚರ" ಗ್ರಂಥ ಲೋಕಾರ್ಪಣೆ
Sadguruvige Kavyadinchara Book release
ದೇವರಹಿಪ್ಪರಗಿ 30: ತಾಲೂಕಿನ ಭೈರವಾಡಗಿ(ಘೋಡಗೇರಿ) ಗ್ರಾಮದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ ಸಂಪಾದನ ಕಾವ್ಯ ಸಂಕಲನ ದೇವರಹಿಪ್ಪರಗಿ ತಾಲೂಕು ಸಾಹಿತ್ಯ ಸಮ್ಮೇಳನದ ಮಾಜಿ ಸರ್ವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಸಂಗಮೇಶ ಕೆರೆಪ್ಪಗೋಳ ವಿರಚಿತ "ಸದ್ಗುರುವಿಗೆ ಕಾವ್ಯದಿಂಚರ"ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಹನುಮಾನ್ ಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ರವಿವಾರದಂದು ಬಿಡುಗಡೆಗೊಂಡಿತು.
ಸ್ಥಳೀಯ ಮಠದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.ಸಾನಿಧ್ಯವನ್ನು ಕಡಕೋಳ ಗ್ರಾಮದ ವೇ.ಮೂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಭೈರವಾಡಗಿ(ಘೋಡಗೇರಿ) ಗ್ರಾಮದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ "ಸದ್ಗುರುವಿಗೆ ಕಾವ್ಯದಿಂಚರ" ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಸಂಗಮೇಶ ಕೆರೆಪ್ಪಗೋಳ ವಿರಚಿತ ಕೃತಿಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾಳವಾರ ಗ್ರಾಮದ ವೇ.ಮೂ ಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.ಸಂಪಾದಕರು, ಹಿರಿಯ ಕಲಾವಿದ-ವಿದ್ವಾಂಸರಾದ ಸಂಗಮೇಶ ಕೆರೆಪ್ಪಗೋಳ ಅವರ ವಿರಚಿತ 9ನೇ ಕೃತಿ ಲೋಕಾರೆ್ಣ ಮಾಡಲಾಯಿತು.
ಗ್ರಂಥ ಮುದ್ರಣ ಲೋಕಾರ್ಣಕ್ಕೆ ಗ್ರಾಮದ ಅರಕ್ಷಕರಾದ ರಾಘವೇಂದ್ರ ಗು. ದೇವೂರ ದಾಸೋಹ ಸೇವೆಯನ್ನು ನೀಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಾಹಿತ್ಯ ಆಸಕ್ತದಾರರು ಇದ್ದರು. ಕಾರ್ಯಕ್ರಮದ ನಿರೂಪಣೆ ಆಯ್.ಎಲ್.ಶಾಬಾದಿ ಹಾಗೂ ಸಿ.ಕೆ. ಕಿರಣಗಿ ಸ್ವಾಗತಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 