ಎಸ್‌ಎಸ್‌ಎಲ್ಸಿ ಮಾದರಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ

ಎಸ್‌ಎಸ್‌ಎಲ್ಸಿ ಮಾದರಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ  SSLC Model Exam: Special Guidance for Students


ಸವದತ್ತಿ 16: ನಗರದ ಜಿ.ಜಿ. ಚೋಪ್ರಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ ಹಾಗೂ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ಕನ್ನಡ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ರಚನಾ ಪರೀಕ್ಷೆ ನಡೆಸಲಾಯಿತು.  

ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯನ್ನು ಗಟ್ಟಿಗೊಳಿಸುವುದು, ಪರೀಕ್ಷಾ ಭಯ ನಿವಾರಿಸುವುದು ಹಾಗೂ ಅವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಪರೀಕ್ಷೆಯ ಮುಖ್ಯ ಉದ್ದೇಶವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.  

ಇದೇ ಮಾದರಿಯಲ್ಲಿ ಎಲ್ಲ ಪ್ರೌಢಶಾಲೆಗಳು ಹಾಗೂ 6ರಿಂದ 8ನೇ ತರಗತಿವರೆಗೆ ರಚನಾ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಮುಂಬರುವ ಎಸ್‌ಎ-1 ಪರೀಕ್ಷೆಗೆ ಸಿದ್ಧತೆ, ಪರೀಕ್ಷೆಯ ಪಾವಿತ್ರ್ಯ ಕಾಪಾಡುವುದು ಹಾಗೂ ಎಸ್‌ಎಸ್‌ಎಲ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಸುವ ಕುರಿತು ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.  

ಈ ಸಂದರ್ಭದಲ್ಲಿ ಭಾರತೀ ಭೂಮಿಗೌಡ, ಸಿದ್ದಪ್ಪ ಜೋಗಿ, ಪ್ರಕಾಶ ತುರಮರಿ, ಸ್ಮಿತಾ, ಬಿ.ಬಿ. ಮಳ್ಳಿ, ಅನಿಲ್ ಗಾವಡೆ, ವಿನೋದಾ ಮುನವಳ್ಳಿ, ಹೇಮಲತಾ ತೋರಗಲ್, ಗುರುನಾಥ ಗುಡೇಣವರ, ಕಾರ್ತಿಕ್ ಚಿಂಚಣಿ, ಸೋಮಲಿಂಗ ಲಕ್ಕಣವರ, ಸುರೇಶ ಬೇಟಗೇರಿ ಸೇರಿದಂತೆ ಹಲವರು ಶಿಕ್ಷಕರು ಉಪಸ್ಥಿತರಿದ್ದರು.