ವಿದ್ಯಾಥರ್ಿನಿ ಮೇಲೆ ಅತ್ಯಾಚಾರ, ಕೊಲೆ ಖಂಡಿಸಿ ಎಸ್ಎಫ್ಐ ಪ್ರತಿಭಟನೆ
ಲೋಕದರ್ಶನ ವರದಿ
ಶಿಗ್ಗಾಂವಿ10: ಮಣ್ಣೂರು ಗ್ರಾಮದ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್ಎಫ್ಐ) ಶಿಗ್ಗಾಂವಿ ತಾಲೂಕು ಸಮಿತಿಯ ನೇತೃತ್ವದಲ್ಲಿ ನಗರದ ಪುರಸಭೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು
ಎಸ್ಎಫ್ಐ ಶಿಗ್ಗಾಂವಿ ತಾಲೂಕು ಅಧ್ಯಕ್ಷೆ ಜ್ಯೋತಿ ದೊಡ್ಮನಿ ಮಾತನಾಡಿ, ಸವಣೂರು ತಾಲ್ಲೂಕಿನ ಕುಣಿಮೆಳ್ಳಹಳ್ಳಿ ಗ್ರಾಮದ ಜಿ.ಎಚ್.ಕಾಲೇಜು ವಿದ್ಯಾಥರ್ಿನಿ ರೇಣುಕಾಳನ್ನ ಎರಡು ದಿನಗಳಿಂದ ಅಪಹರಿಸಿ ಅತ್ಯಾಚಾರ ಮಾಡಿ, ಅವಳನ್ನು ಕುಣಿಮೆಳ್ಳಹಳ್ಳಿ ಸೇತುವೆ ಕೆಳಗಡೆ ಸುಟ್ಟು ಹಾಕಲಾಗಿದೆ. ಈ ಘಟನೆಯನ್ನುಎಸ್ಎಫ್ಐ ಶಿಗ್ಗಾಂವಿ ತಾಲ್ಲೂಕು ಸಮಿತಿಯುಖಂಡಿಸುತ್ತದೆ.
ಕಳೆದ ತಿಂಗಳು ಇಂತಹದೆ ಪ್ರಕರಣ ಕೋಲಾರದ ಮಾಲೂರಿನಲ್ಲಿಯೂ ಇದೆ ತರಹದ ಘಟನೆ ನಡೆದಿತ್ತು.
ಬಾಲಕಿಯರ ಮೇಲೆ, ವಿದ್ಯಾಥರ್ಿನಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿವೆ ಈ ಕುರಿತು ರಾಜ್ಯ ಸಕರ್ಾರ ಸಂಬಂಧಪಟ್ಟ ಅಧಿಕಾರಿಗಳು, ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲಾ. ಕುಣಿಮೆಳ್ಳಹಳ್ಳಿ ಗ್ರಾಮದ ವಿದ್ಯಾಥರ್ಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುಷ್ಕಮರ್ಿಗಳನ್ನು ಕೂಡಲೇ ಬಂಧನ ಮಾಡಬೇಕು, ಜಿಲ್ಲೆಯಾದ್ಯಂತ ವಿದ್ಯಾಥರ್ಿನಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಬೇಕು ಇಲ್ಲವಾದಲ್ಲಿ ಎಸ್ಎಫ್ಐ ಜಿಲ್ಲಾ ಸಮಿತಿಯು ಮುಂದಿನ ದಿನಗಳಲ್ಲಿ ತೀವ್ರತೆರನಾದ ಪ್ರತಿಭಟನೆ ನಡೆಸಲಾಗಿತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ತಾಲ್ಲೂಕು ಮುಖಂಡರಾದ ಪ್ರಮೋದಿನಿ, ಪ್ರಿಯಾಂಕಾ ಹುಲಗೂರು, ಉಮೇಶ ಹಾಳಿ, ಪ್ರವೀಣ ಮಾಳವದೆ, ಯಶೋಧ ಅಣ್ಣಿಗೇರಿ, ಕವಿತಾ ಹರಿಜನ, ರಾಧ ಹರಿಜನ, ಚಂದ್ರುತಿಪ್ಪಣ್ಣವರ ಮುಂತಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 