ಎಸ್.ಡಿ.ಮುಡೆಣ್ಣವರರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ
S.D. Mudennavara receives Young Worker Award
ಮುಂಡಗೋಡ 09: ಪಟ್ಟಣದ ಆದಿ ಜಾಂಬವ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಎಸ್. ಡಿ. ಮುಡೆಣ್ಣವರ.ಇವರಿಗೆ ಯುವ ಕಾರ್ಯರ್ಷಿ ಪ್ರಶಸ್ತಿ- 2025 ಪ್ರಶಸ್ತಿ ಯನ್ನು ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು. ತ್ರಿವರ್ಣ ಫೌಂಡೇಶನ್ ಅಂದ್ರ ಪ್ರದೇಶ ರಾಜ್ಯದ ಸಂಸ್ಥೆಯಿಂದ ಸುಮಾರು 10 ರಾಜ್ಯಗಳ ಕವಿಗಳು ಮತ್ತು ಸಾಹಿತಿಗಳ ರಾಷ್ಟೀಯ ಕಾವ್ಯ ಉತ್ಸವ-6 ರನ್ನು ಅಂದ್ರ ಪ್ರದೇಶ ಸರ್ಕಾರದಲ್ಲಿ ಚೆರ್ಮನ್ ಆಗಿ ಸೇವೆ ಸಲ್ಲಿಸಿದ ಕಲಾರತ್ನ ಶ್ರೀ. ಪೋಟ್ಲರಿ ಹರಿಕೃಷ್ಣ ರವರ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರದ ರಾಜಧಾನಿಯಾದ ಹೈದರಾಬಾದ್ ನ ಬಿರ್ಲಾ ಮಂದಿರ ಹತ್ತಿರವಿರುವ ಬಿರ್ಲಾ ತರಾಲಯದ ಬಾಸ್ಕರ್ ಆಡಿಟೋರಿಯಂನಲ್ಲಿ ರಾಷ್ಟೀಯ ಕಾವ್ಯ ಉತ್ಸವ 6 ರ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಪ್ರಶಸ್ತಿಯನ್ನು ಕಲಾರತ್ನ ಪೋಟ್ಲರಿ ಹರಿಕೃಷ್ಣ ಅಧ್ಯಕ್ಷರು ತ್ರಿವರ್ಣ ಪೌಡೇಶನ್ ಅಂದ್ರ ಪ್ರದೇಶ ತೆಲಂಗಾಣ ರಾಷ್ಟ್ರದ ಪದ್ಮಶ್ರೀ ಹಾಗೂ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಕೊಲಕುರ್ ಇನಾಕ್ ಹಾಗೂ ತೆಲಂಗಾಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷಿಣಿಯಾದ ನಂದಿನಿ. ಸುಬ್ಬಾ ರೆಡ್ಡಿ ತೆಲಂಗಾಣ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಠ್ಠಲ ಜೋಶಿ ಮತ್ತು ನಿವೃತ್ತ ವರಿಷ್ಟಾಧಿಕಾರಿಗಳು ಮತ್ತು ತೆಲಂಗಾಣ ವಿಧಾನ ಪರಿಷತ್ತು ಸದಸ್ಯರಾದ ಇಕ್ಬಾಲ್ ರವರು ಪತ್ರಿಕೆಯ ಸಂಪಾದಕ ಬೈಸಾ. ದೇವಿದಾಸ ಮತ್ತು ತೆಲಂಗಾಣದಲ್ಲಿರುವ ಕನ್ನಡ ಕವಿಯತ್ರಿ ಹಾಗೂ ಸಾಹಿತಿಗಳಾದ ನವೀನಾ ದೇಶಪಾಂಡೆ ದೇಶದ ವಿವಿಧ ರಾಜ್ಯದ ಸಾಹಿತಿಗಳು ಮತ್ತು ಕವಿಗಳು ಮುಂತಾದವರು ಹಾಜರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 