ಧರ್ಮ ಉಳಿವಿಗಾಗಿ ಆಚಾರ ವಿಚಾರಗಳು ಬಹುಮುಖ್ಯ- ಸಿದ್ದರಾಮೇಶ್ವರ

ಧರ್ಮ ಉಳಿವಿಗಾಗಿ ಆಚಾರ ವಿಚಾರಗಳು ಬಹುಮುಖ್ಯ- ಸಿದ್ದರಾಮೇಶ್ವರ Rituals are very important for the survival of religion - Siddaramaeshwar

ಧರ್ಮ ಉಳಿವಿಗಾಗಿ ಆಚಾರ ವಿಚಾರಗಳು ಬಹುಮುಖ್ಯ- ಸಿದ್ದರಾಮೇಶ್ವರ 

ಬ್ಯಾಡಗಿ 10: ಧರ್ಮದ ಉಳಿವಿಗೆ ಧರ್ಮದ ಆಚರಣೆಗಳು ಬಹುಮುಖ್ಯವಾಗಿವೆಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.ಶುಕ್ರವಾರ ಅವರು ತಾಲೂಕಿನ ಹಳೆಶಿಡೇನೂರ ಗ್ರಾಮದಲ್ಲಿ  ರಮೇಶ ಸುತ್ತಕೋಟಿ ಬಂಧುಗಳ ಆಶ್ರಯದಲ್ಲಿ ನಡೆದ ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಮದಲ್ಲಿರುವ ದುರ್ಗಾದೇವಿ ದೇವಸ್ಥಾನವು ಅತ್ಯಂತ ಪುರಾತನ ಕಾಲದಾಗಿದೆ. ಭೋವಿ ಸಮಾಜವು ಸದಾ ಧಾರ್ಮಿಕ ಕಾರ್ಯಗಳನ್ನು ಚಾಚು ತಪ್ಪದೆ ನಡೆಸುವ ಮೂಲಕ ತನ್ನದೆ ಪರಂಪರೆ ಹೊಂದಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಇಂತಹ ಧಾರ್ಮಿಕ ಕಾರ್ಯಗಳ ಅಗತ್ಯವಿದೆ ಎಂದರು.ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಿಗೆ ಸಮಾಧಾನ ಸಂತೋಷ ನೀಡಲಿವೆ ಎಂದರು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ ಪವಿತ್ರವಾದ ಮನುಷ್ಯ ಜನ್ಮವೆತ್ತಿ ಬಂದ ಮೇಲೆ ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬದುಕಬೇಕೆಂದರು.ಸಾನಿಧ್ಯ ವಹಿಸಿದ್ದ ನಿಜಶರಣ  ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಕಡೆನಂದಿಹಳ್ಳಿ ಮಠದ ರೇವಣ ಶಿದ್ದೇಶ್ವರ ಶ್ರೀಗಳು, ಮಾಜಿ ಸಚಿವ ಬಿ.ಸಿ.ಪಾಟೀಲ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ ಸುತ್ತಕೋಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಧುರೀಣರಾದ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ಬೀರ​‍್ಪ ಬಣಕಾರ, ಡಿ.ಎಚ್‌.ಬುಡ್ಡನಗೌಡ, ರವಿ ಪೂಜಾರ, ಸವಿತಾ ಸುತ್ತಕೋಟಿ, ರೇಖಾ ದೊಡ್ಡಮನಿ, ಸುರೇಶ ಸುತ್ತಕೋಟಿ, ಚಂದ್ರಣ್ಣ ಮುಳಗುಂದ,ಶಂಭಣ್ಣ ಪಾಟೀಲ, ಈರಣ್ಣ ಮಲ್ಲಾಡದ, ಮಲ್ಲಿಕಾರ್ಜುನ ಕರಿಲಿಂಗಪ್ಪನವರ,ಶಿವನಗೌಡ ವೀರನಗೌಡ, ಬಸವರಾಜ ಸವಣೂರ, ಸುರೇಶಗೌಡ ಪಾಟೀಲ ಇದ್ದರು.