ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವ
Revanasiddheshwara palanquin festival
ತಾಂಬಾ 18: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದ್ದು ಕೊಟ್ಟ ಮಾತಿಗೆ ವಿಶ್ವಾಸವಿಟ್ಟು ಕೆಲಸ ಮಾಡುವ ಹಾಲುಮತ ಸಮಾಜದ ಜನರು ಎಂದು ಗ್ರಾಮದ ಯುವನಾಯಕ ಗೋಲ್ಲಾಳಲಿಂಗನಗೌಡ ಜೋತಿಗೊಂಡ ಹೇಳಿದರು.
ಹಿರೇರೂಗಿ ಗ್ರಾಮದ ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವದಲ್ಲಿ ಅವರು ಮಾತನಾಡಿದರು. ತಮ್ಮ ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಧರ್ಮ ಪಾಲನೆ ಮಾಡುತ್ತಾ ಮತ್ತೊಬ್ಬರ ಹಣಕ್ಕೆ ಆಮಿಷಕ್ಕೊಳಗಾಗದೆ ತಮ್ಮ ತನವನ್ನು ಕೈದುಕೊಳ್ಳಬೆಕೆಂದರು.
ಪೀರ್ಪ ಜೋತಿಗೊಂಡ, ಸೈದಪ್ಪ ಜೋತಿಗೊಂಡ, ಹಣಮಂತ ಜೋತಿಗೊಂಡ ರೇವಣಸಿದ್ದ ಜೋತಿಗೊಂಡ, ಮಹಾದೇವಪ್ಪ ಜೋತಿಗೊಂಡ, ಲಕ್ಷಣ ಜೋತಿಗೊಂಡ, ಜಟ್ಟೆಪ್ಪ ಜೋತಿಗೊಂಡ ಸೇರಿದಂತೆ ಮತ್ತಿತರರು ಇದ್ದರು.
ಇದ್ದಕ್ಕೂ ಮೊದಲು ಗ್ರಾಮದಲ್ಲಿ ಪಲ್ಲಕ್ಕಿಗಳು ಡೋಳ್ಳು ಕುಣಿತದೊಂದಿಗೆ ಗ್ರಾಮದಲ್ಲಿ ಭವ್ಯ ಮೇರವಣಿಗೆಯೊಂದಿಗೆ ಗಂಗ ಸೀತಾಳ ಮುಗಿಸಿಕೊಂಡು ತನ್ನಿಹಳ್ಳಿ ಗ್ರಾಮದ ಶ್ರೀ ಜನವೇರ ಸಿದ್ದೇಶ್ವರ, ಬನ್ನಿಹಟ್ಟಿ ಗ್ರಾಮದ ಲಾಯಮ್ಮದೇವಿ, ಶ್ರೀ ಜಟ್ಟಿಂಗೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಪಲ್ಲಕ್ಕಿಗಳು ಮೂಲಸ್ಥಳಕ್ಕೆ ಆಗಮಿಸಿ ಹೂವಿನ ಹಚ್ಚಡದಲ್ಲಿ ಕುಡಿಸಲಾಯಿತ್ತು.
ರಾತ್ರಿ ಶ್ರೀ ರೇವಣಸಿದ್ದೇಶ್ವರ ಗಾಯನ ಸಂಘದ ಹಣಮಂತ ಗಿಣ್ಣೆ ಹಾಗೂ ಜೆಟ್ಟಂಗೇಶ್ವರ ಗಾಯನ ಸಂಘದ ಜಟ್ಟೆಪ್ಪ ಮಿರಗಿ ಮತ್ತು ಸಂಗೊಳ್ಳಿರಾಯಣ್ಣ ಗಾಯನ ಸಂಘದ ಯಲ್ಲಪ್ಪ ಕೇಶಗೋಳ ನಡುವೆ ಡೊಳ್ಳಿನ ಪದಗಳ ಸ್ಪರ್ಧೆ ಏರಿ್ಡಸಲಾಗಿತ್ತು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸಂಘಟಕರು ಅಚ್ಚುಕಟ್ಟಾಗಿ ಮಾಡಿದರು. ನಂತರ ಆರುತಿ ಬೆಳಗಿಸಿಕೊಂಡು ಎಲ್ಲ ಪಲ್ಲಕ್ಕಿಗಳು ತಮ್ಮ ಮೂಲಸ್ಥಾನಕ್ಕೆ ಹೋಗಲು ಬೀಳ್ಕೊಡಲಾಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 