ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವ
Revanasiddheshwara palanquin festival
ತಾಂಬಾ 18: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದ್ದು ಕೊಟ್ಟ ಮಾತಿಗೆ ವಿಶ್ವಾಸವಿಟ್ಟು ಕೆಲಸ ಮಾಡುವ ಹಾಲುಮತ ಸಮಾಜದ ಜನರು ಎಂದು ಗ್ರಾಮದ ಯುವನಾಯಕ ಗೋಲ್ಲಾಳಲಿಂಗನಗೌಡ ಜೋತಿಗೊಂಡ ಹೇಳಿದರು.
ಹಿರೇರೂಗಿ ಗ್ರಾಮದ ರೇವಣಸಿದ್ದೇಶ್ವರ ಪಲ್ಲಕ್ಕಿ ಮಹೋತ್ಸವದಲ್ಲಿ ಅವರು ಮಾತನಾಡಿದರು. ತಮ್ಮ ಮಕ್ಕಳಿಗೆ ವಿದ್ಯೆಯನ್ನು ಕಲಿಸಿ ಧರ್ಮ ಪಾಲನೆ ಮಾಡುತ್ತಾ ಮತ್ತೊಬ್ಬರ ಹಣಕ್ಕೆ ಆಮಿಷಕ್ಕೊಳಗಾಗದೆ ತಮ್ಮ ತನವನ್ನು ಕೈದುಕೊಳ್ಳಬೆಕೆಂದರು.
ಪೀರ್ಪ ಜೋತಿಗೊಂಡ, ಸೈದಪ್ಪ ಜೋತಿಗೊಂಡ, ಹಣಮಂತ ಜೋತಿಗೊಂಡ ರೇವಣಸಿದ್ದ ಜೋತಿಗೊಂಡ, ಮಹಾದೇವಪ್ಪ ಜೋತಿಗೊಂಡ, ಲಕ್ಷಣ ಜೋತಿಗೊಂಡ, ಜಟ್ಟೆಪ್ಪ ಜೋತಿಗೊಂಡ ಸೇರಿದಂತೆ ಮತ್ತಿತರರು ಇದ್ದರು.
ಇದ್ದಕ್ಕೂ ಮೊದಲು ಗ್ರಾಮದಲ್ಲಿ ಪಲ್ಲಕ್ಕಿಗಳು ಡೋಳ್ಳು ಕುಣಿತದೊಂದಿಗೆ ಗ್ರಾಮದಲ್ಲಿ ಭವ್ಯ ಮೇರವಣಿಗೆಯೊಂದಿಗೆ ಗಂಗ ಸೀತಾಳ ಮುಗಿಸಿಕೊಂಡು ತನ್ನಿಹಳ್ಳಿ ಗ್ರಾಮದ ಶ್ರೀ ಜನವೇರ ಸಿದ್ದೇಶ್ವರ, ಬನ್ನಿಹಟ್ಟಿ ಗ್ರಾಮದ ಲಾಯಮ್ಮದೇವಿ, ಶ್ರೀ ಜಟ್ಟಿಂಗೇಶ್ವರ ಹಾಗೂ ಶ್ರೀ ರೇವಣಸಿದ್ದೇಶ್ವರ ಪಲ್ಲಕ್ಕಿಗಳು ಮೂಲಸ್ಥಳಕ್ಕೆ ಆಗಮಿಸಿ ಹೂವಿನ ಹಚ್ಚಡದಲ್ಲಿ ಕುಡಿಸಲಾಯಿತ್ತು.
ರಾತ್ರಿ ಶ್ರೀ ರೇವಣಸಿದ್ದೇಶ್ವರ ಗಾಯನ ಸಂಘದ ಹಣಮಂತ ಗಿಣ್ಣೆ ಹಾಗೂ ಜೆಟ್ಟಂಗೇಶ್ವರ ಗಾಯನ ಸಂಘದ ಜಟ್ಟೆಪ್ಪ ಮಿರಗಿ ಮತ್ತು ಸಂಗೊಳ್ಳಿರಾಯಣ್ಣ ಗಾಯನ ಸಂಘದ ಯಲ್ಲಪ್ಪ ಕೇಶಗೋಳ ನಡುವೆ ಡೊಳ್ಳಿನ ಪದಗಳ ಸ್ಪರ್ಧೆ ಏರಿ್ಡಸಲಾಗಿತ್ತು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸಂಘಟಕರು ಅಚ್ಚುಕಟ್ಟಾಗಿ ಮಾಡಿದರು. ನಂತರ ಆರುತಿ ಬೆಳಗಿಸಿಕೊಂಡು ಎಲ್ಲ ಪಲ್ಲಕ್ಕಿಗಳು ತಮ್ಮ ಮೂಲಸ್ಥಾನಕ್ಕೆ ಹೋಗಲು ಬೀಳ್ಕೊಡಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 