ಪತ್ತಾರ, ಬನಪ್ಪನವರ ಸೇವಾನಿವೃತ್ತಿ ಸಮಾರಂಭ
Retirement ceremony of Pattara, Banappa
ಪತ್ತಾರ, ಬನಪ್ಪನವರ ಸೇವಾನಿವೃತ್ತಿ ಸಮಾರಂಭ
ರಾಯಬಾಗ, 01 ; ಶಿಕ್ಷಣದ ಮಹತ್ವವನ್ನು ಅರಿತ ಅಬಾಜಿಯವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದರ ಜೊತೆಗೆ ಹಾಸ್ಟೇಲ್ಗಳನ್ನು ತೆರೆದು ಈ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅಂದೇ ಅಡಿಪಾಯ ಹಾಕಿದ್ದರು ಎಂದು ಎಸ್ಪಿಎಮ್ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ ಹೇಳಿದರು.
ಗುರುವಾರ ಪಟ್ಟಣದ ವಿವೇಕಾನಂದ ಕಲಾ ಮಂದಿರ ಮತ್ತು ಸಂಗೀತ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಉಪನ್ಯಾಸಕ ಪಿ.ಆಯ್.ಪತ್ತಾರ ಹಾಗೂ ಸಿಪಾಯಿ ಎಸ್.ಎನ್.ಬನಪ್ಪನವರ ಸೇವಾನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷಾ ಶಿಕ್ಷಕರಗಿಂತ ಚಿತ್ರಕಲಾ ಶಿಕ್ಷಕರಿಗೆ ಹೆಚ್ಚಿನ ಸ್ಥಾನ ಮತ್ತು ಮಹತ್ವವಿದೆ. ಕಲೆ ಇಲ್ಲದ ಶಿಕ್ಷಣ ಪರಿಪೂರ್ಣ ಅನ್ನಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಅಮರಸಿಂಹ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಪಿ.ಬಿ.ಗವಾನಿ, ಹಿರಿಯ ಚಿತ್ರಕಲಾವಿದ ಡಾ.ಜಿ.ಏ.ಪತ್ತಾರ, ಹೆಸ್ಕಾಂ ಜೆಇ ಬಿ.ಎಸ್.ಮಗದುಮ್ಮ, ಚಿಕ್ಕೋಡಿ ಡಯಟ್ ಅಧಿಕಾರಿ ಭಾರತಿ ಸನದಿ, ನಿವೃತ್ತ ಪ್ರಾಚಾರ್ಯರಾದ ವಿ.ಡಿ.ಸಾಲಿ, ಎಸ್.ಆರ್.ಪೋತದಾರ, ಬಿ.ಎನ್.ಹಾದಿಮನಿ, ಆರ್.ಎ.ದೇವರುಷಿ, ಸರಸ್ವತಿ ಪತ್ತಾರ ಸೇರಿ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 