ರೇಷ್ಮಾಬೇಗಂ ಅವರಿಗೆ ಕೊಪ್ಪಳ ಸ್ರ್ತೀ ರತ್ನ ಪ್ರಶಸ್ತಿ

ರೇಷ್ಮಾಬೇಗಂ ಅವರಿಗೆ ಕೊಪ್ಪಳ ಸ್ರ್ತೀ ರತ್ನ ಪ್ರಶಸ್ತಿ  Reshma Begum awarded Koppal Stree Ratna Award

ಕೊಪ್ಪಳ  14: ತಾಲ್ಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಯೋಗ ಪಟು ರೇಷ್ಮಾಬೇಗಂ ವಡ್ಡಟ್ಟಿ ಅವರಿಗೆ ಕೊಪ್ಪಳ ಜಿಲ್ಲಾ ಸ್ತ್ರೀ ರತ್ನ ಪ್ರಶಸ್ತಿ ದೊರಕಿದೆ.ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಬಿ.ವ್ಹಿ.ಶೆಟ್ಟರ್ ಮಂಗಲ ಭವನದಲ್ಲಿ ಆರಾಮ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅವರಿಗೆ ಕೊಪ್ಪಳ ಸ್ರ್ತೀ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಆರಾಮ ಸಂಸ್ಥೆ ಸಂಸ್ಥಾಪಕಿ, ವಕೀಲರಾದ ಮಮತಾ ರಾಯರೆಡ್ಡಿ, ಪದ್ಮಶ್ರೀ ಪುರಸ್ಕೃತೆ ಭೀಮವ್ವ ಶಿಳ್ಳಿಕ್ಯಾತರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರುಕ್ಷ್ಮಿಣಿಬಾಯಿ ಚಿತ್ರಗಾರ, ಶರಣಮ್ಮ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಗೊಂಡಬಾಳ, ಪರೀಧಾಬೇಗಂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.