ಶೈಕ್ಷಣಿಕ ಪ್ರಭಾವ ಅಳೆಯಲು ಸಂಶೋಧನಾ ಮೆಟ್ರಿಕ್ಸ್ ಅಗತ್ಯ: ಪ್ರೊ. ಸಂಪತ್ ಕುಮಾರ್
Research metrics are necessary to measure educational impact: Prof. Sampath Kumar
ಬೆಳಗಾವಿ 12: ಶೈಕ್ಷಣಿಕ ಗುಣಮಟ್ಟ, ಗೋಚರತೆ ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಲ್ಲಿ ಸಂಶೋಧನಾ ಮೆಟ್ರಿಕ್ಸ್ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರೊ. ಬಿ. ಟಿ. ಸಂಪತ್ ಕುಮಾರ್ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವಿಶ್ವವಿದ್ಯಾಲಯ ಗ್ರಂಥಾಲಯದ ಸಹಯೋಗದಲ್ಲಿ ಸೋಮವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಿಎಂ-ಉಷಾ (ಒಇಖಗ) ಯೋಜನೆಯಡಿಯ 'ಸಂಶೋಧನಾ ಮೆಟ್ರಿಕ್ಸ್ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಸಂಶೋಧಕರು ಸಂಶೋಧನಾ ಉತ್ಕೃಷ್ಟತೆಯನ್ನು ಬಲಪಡಿಸಲು ಸೈಟೇಶನ್ ಅನಾಲಿಸಿಸ್, ಹೆಚ್-ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್ ಮತ್ತು ಆಲ್ಟ್ಮೆಟ್ರಿಕ್ಸ್ಗಳಂತಹ ಸಾಧನಗಳಲ್ಲಿ ಪರಿಣತಿ ಹೊಂದಿರಬೇಕು ಎಂದು ಹೇಳಿದರು.
ವಿವಿಧ ಸಂಶೋಧನಾ ಮೌಲ್ಯಮಾಪನ ಸಾಧನಗಳು ಮತ್ತು ಇಂಡೆಕ್ಸಿಂಗ್ ಡೇಟಾಬೇಸ್ಗಳ ಬಗ್ಗೆ ಒಳನೋಟವುಳ್ಳ ಉಪನ್ಯಾಸ ನೀಡಿದ ಅವರು, ಇವುಗಳ ವ್ಯವಸ್ಥಿತ ಬಳಕೆಯು ಭಾರತೀಯ ಸಂಶೋಧನೆಯ ಜಾಗತಿಕ ಗೋಚರತೆಯನ್ನು ಹೆಚ್ಚಿಸುವುದಲ್ಲದೆ, ಶೈಕ್ಷಣಿಕ ಸಂಸ್ಥೆಗಳ ಶ್ರೇಯಾಂಕವನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ವಿಶ್ವನಾಥ ಬಿ. ಅವಟಿ ಮಾತನಾಡಿ, ಶೈಕ್ಷಣಿಕ ಮೌಲ್ಯಮಾಪನದಲ್ಲಿ ಪ್ರಮಾಣಾತ್ಮಕ ಮತ್ತು ಗುಣಾತ್ಮಕ ಸೂಚಕಗಳೆರಡನ್ನೂ ಅರ್ಥಮಾಡಿಕೊಳ್ಳುವುದು ಮುಖ್ಯ. ಸಂಶೋಧಕರು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ನೈತಿಕ ಮತ್ತು ಮಾಹಿತಿಯುಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಭಾಗದ ಅಧ್ಯಕ್ಷ ಡಾ. ಕಿರಣ್ ಪಿ. ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮಕಾಲೀನ ಉನ್ನತ ಶಿಕ್ಷಣದಲ್ಲಿ ಸಂಶೋಧನಾ ಮೆಟ್ರಿಕ್ಸ್ ಬೆಳೆಯುತ್ತಿರುವ ಪ್ರಸ್ತುತತೆಯನ್ನು ಒತ್ತಿ ಹೇಳಿದರು. ಸಂಯೋಜಕ ಡಾ. ರಮೇಶ್ ಬಿ. ಕುರಿ ಸ್ವಾಗತಿಸಿ, ಸಹ ಸಂಯೋಜಕರು ಡಾ: ಭವಾನಿ ಶಂಕರ್ ಮಂದಿಸಿದರು. ವೇದಿಕೆಯಲ್ಲಿ ಪಿಎಂ-ಉಷಾ ನೋಡಲ್ ಅಧಿಕಾರಿ ಡಾ. ನಂದಿನಿ ದೇವರಮನಿ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 