ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧನ ರಕ್ಷಣೆ

ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧನ ರಕ್ಷಣೆ Rescue of an elderly man who was attempting suicide

ಕೊಲ್ಹಾರ 14: ಸೇತುವೆ ಮೇಲಿನಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧನನ್ನು ರಕ್ಷಣೆ ಮಾಡಿದ ಘಟನೆ ಶುಕ್ರವಾರ ಸಂಜೆ ಕೊಲ್ಹಾರ ಸೇತುವೆ ಮೇಲೆ ನಡೆದಿದೆ. 

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯತ್ನಟ್ಟಿ ಗ್ರಾಮದ ಸಿದ್ದಪ್ಪ ಕರಿಗಾರ ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ಸೇತುವೆ ಮೇಲಿನಿಂದ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದನ್ನು ನೋಡಿದ ಈರಣ್ಣ ಬಾಗಿ ಆ ವೃದ್ಧ ಮುದುಕನನ್ನು ಓಡಿ ಹೋಗಿ ರಕ್ಷಿಸಿದ್ದಾನೆ. ನಂತರ ಈರಣ್ಣ ಸ್ಥಳೀಯ ಕೊಲ್ಹಾರ ಪೋಲಿಸ ಠಾಣೆಗೆ ಪೋನ್ ಮಾಡಿ ಮಾಹಿತಿ ತಿಳಿಸಿ ತನ್ನ ಕಾರಿನಲ್ಲಿಯೇ ಆ ವೃದ್ಧನನ್ನು ಕರೆದುಕೊಂಡು ಹೋಗಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾನೆ. ವೃದ್ಧನನ್ನು ಪೋಲಿಸರು ವಿಚಾರಣೆ ನಡೆಸಿದ್ದಾರೆ. 

 ಪಿಎಸ್‌ಐ ಅಶೋಕ ನಾಯಕ ಈರಣ್ಣ ಬಾಗಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.  

ನಾನು ಬಾಗಲಕೋಟೆಯಿಂದ ಕೊಲ್ಹಾರ ಸೇತುವೆ ಮೇಲೆ ಬರುತ್ತಿದ್ದಾಗ ವೃದ್ಧ ಕೃಷ್ಣಾ ನದಿ ಸೇತುವೆ ಮಧ್ಯದಲ್ಲಿ ತಡೆಗೋಡೆ ಆಚೆ ಹೋಗಿ ಇನ್ನೇನು ಜಿಗಿಯಲು ಯತ್ನಿಸುತ್ತಿರುವುದನ್ನು ನೋಡಿದ ನಾನು ತಕ್ಷಣ ಆ ವೃದ್ಧನ ಕೈಹಿಡಿದು ಮೇಲಕ್ಕೆ ಎತ್ತಿದೆ ಆದರೆ ಆತ ನಾನು ಸಾಯುತ್ತೇನೆ ನನ್ನನ್ನು ಬಿಟ್ಟುಬಿಡಿ ಎನ್ನುತ್ತಿದ್ದ.ಈರಣ್ಣ ಬಾಗಿ  

ವೃದ್ಧನ ರಕ್ಷಣೆಗೆ ಮುಂದಾದ ಪ್ರತ್ಯಕ್ಷದರ್ಶಿ 


Bagalkot