ಕೊಪ್ಪಳ 27: ದಿ. 26ರಂದು ಕುಕನೂರಿನಲ್ಲಿ ಬಾಲಕಾರ್ಮಿಕ ತಪಾಸಣೆ ನಡೆಸಲಾಯಿತು. ವಿವಿಧ ವಾಣಿಜ್ಯ ಸಂಸ್ಥೆಗಳಾದ ಕಿರಾಣಿ ಅಂಗಡಿ ಬೇಕರಿ ಪಿಜ್ಜಾ ಸೆಂಟರ್ ಪೂಜಾ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ 04 ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ವಶಕ್ಕೆ ಪಡೆದು ಕೊಂಡು ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಯಿತು.
ಸದರಿ ತಂಡದಲ್ಲಿ ಯೋಜನಾ ನಿರ್ದೇಶಕರರಾದ ಬಸವರಾಜ ಹಿರೇಗೌಡ್ರ ಕುಷ್ಟಗಿ ಕಾರ್ಮಿಕ ನೀರೀಕ್ಷಕರು ನಿವೇದಿತಾ, ಸ್ಪಂದನ ಸಂಸ್ಥೆಯ ಕಾರ್ಯದರ್ಶಿಗಳಾದ ಸುಶಿಲಾ . ವಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಹಾಜರಿದ್ದರು..