ಬೆಳಗಾವಿ 09: ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹೊಸೂರು ಓಣಿಯಲ್ಲಿ ಲಿಂಗರಾಜ ಕಲ್ಯಾಣಮಂಟಪ ಇದ್ದು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸುಮಾರು 15 ವರ್ಷಹಿಂದೆನೇ ಈ ಕಲ್ಯಾಣ ಮಂಟಪವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿದ್ದು ಇದುವರೆಗೂ ಸಾರ್ವಜನಿಕರಿಗೆ ಅನುಕೂಲವಾಗದೆ ಹಾಳುಬಿದ್ದ ಕಲ್ಯಾಣ ಮಂಟಪವಾಗಿದ್ದು ಕಲ್ಯಾಣಮಂಟಪದ ಕಿಟಕಿ ಹಾಗೂ ಬಾಗಿಲುಗಳು ಒಡೆದು ಹೋಗಿವೆ. ಮೇಲ್ಕಾವಣಿ ಕೂಡ ದುರಸ್ತಿಯಲ್ಲಿದೆ ಹಾಗೂ ಈ ಕಲ್ಯಾಣಮಂಟಪಕ್ಕೆ ಸರಿಯಾಗಿ ರಸ್ತೆಕೂಡ ಇಲ್ಲ ಆದಷ್ಟು ಬೇಗ ಶಿರಸಂಗಿ ಲಿಂಗ ರಾಜಟ್ರಸ್ಟಿನ ಅಧ್ಯಕ್ಷರಾದ ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಸವದತ್ತಿ ತಹಶೀಲ್ದಾರ್ ಅವರು ಇದರ ಕಡೆಗ ಮನಹರಿಸಿ ಶಿರಸಂಗಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಮಾಜ ಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಮತ್ತು ಪ್ರಶಾಂತ ಶಿವಪ್ಪ ಅಂಗಡಿ ಅವರು ತಹಶೀಲ್ದಾ ರ್ಮಲ್ಲಿಕಾರ್ಜುನ್ಹೆಗ್ಗನ್ನವರ ಇವರಿಗೆ ಮನವಿ ಸಲ್ಲಿಸಿದರು.