ಮಹಾಲಿಂಗಪುರಿಂದ ಮುಧೋಳಕ್ಕೆ ಬಸ್ ಬಿಡಲು ಮನವಿ

ಮಹಾಲಿಂಗಪುರಿಂದ ಮುಧೋಳಕ್ಕೆ ಬಸ್ ಬಿಡಲು ಮನವಿ  Request to run a bus from Mahalingapur to Mudhol

ರನ್ನ ಬೆಳಗಲಿ 20: ಮಹಾಲಿಂಗಪುರದಿಂದ ಮುಧೋಳಕ್ಕೆ ಪ್ರತಿ ದಿನ ಸಂಜೆ 4.30 ರಿಂದ 5ಗಂಟೆ ವೇಳೆ ಸಿಟಿ ಬಸ್ ಬಿಡಬೇಕೆಂದು ಆಗ್ರಹಿಸಿ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮುಧೋಳ್ ಘಟಕದ ವ್ಯವಸ್ಥಾಪಕರಿಗೆ ಸಮೀಪದ ರನ್ನ ಬೆಳಗಲಿ ಎಸ್ ಜಿ ಎಂ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.  

ಸಂಜೆ 4.30ರ ವೇಳೆ ಶಾಲಾ ಕಾಲೇಜುಗಳು ಬಿಡುತ್ತವೆ ಈ ಸಮಯದಲ್ಲಿ ಮಹಾಲಿಂಗಪುರದಿಂದ ಮುಧೋಳಕ್ಕೆ ಹೋಗಲು ಯಾವುದೇ ಸಿಟಿ ಬಸ್ ಇಲ್ಲದ ಕಾರಣ ಮಹಾಲಿಂಗಪುರದಿಂದ ಬೆಳಗಲಿ, ಮಳಲಿ ಕೆನಾಲ್, ಸಾಲಿಮನಿ, ಮುಗಳಖೋಡ್ ಮತ್ತು ಸೊರಗಾವಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಒಂದು ವಾರದ ಒಳಗೆ ಬಸ್ಸುಗಳನ್ನು ಬಿಟ್ಟು ಸಾರಿಗೆ ಸಂಪರ್ಕವನ್ನು ಸರಿಪಡಿಸದೆ ಹೋದರೆ ಮುಷ್ಕರ ಮಾಡಲಾಗುವುದು ಎಂದು ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯ ಬಾಳಪ್ಪ ಯಡಹಳ್ಳಿ ಎಚ್ಚರಿಸಿದ್ದಾರೆ. 

 ಮುತ್ತಪ್ಪ ಅಂಗಡಿ, ಶಿವು ಗಾಣಿಗೇರ್, ಸಿದ್ದು ಕನಬೂರ್, ಸಾಗರ್ ಹವಾಲ್ದಾರ್, ಲಕ್ಷ್ಮಣ್ ಹಿಕಡಿ, ಸಿದ್ದು ದೊಡಹಟ್ಟಿ, ಹುಲ್ಲಪ್ಪ ಚಂದಪ್ಪನವರ, ದರ್ಶನ್ ಕಾಳವ್ವಗೋಳ್, ಮಲ್ಲು ಪೂಜಾರಿ, ಮುತ್ತು ಪೂಜಾರಿ, ಸದಾಶಿವ್ ಅವರಾದಿ ಇನ್ನಿತರ ಈ ಸಂದರ್ಭದಲ್ಲಿ ಹಾಜರಿದ್ದರು.