ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಲು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ

ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಲು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ Request to KSRTC officials to relocate Indira Canteen

ಯರಗಟ್ಟಿ 07: ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಮುಖಂಡರು.  

ಬಸ್ ನಿಲ್ದಾಣದ ಆವರಣದಲ್ಲಿ ಆರಂಭವಾಗುತ್ತಿರುವ ಕ್ಯಾಂಟೀನ್ ಪ್ರವಾಸಿ ಮಂದಿರದಲ್ಲಿ ಪ್ರಾರಂಭಿಸಲು ವಕೀಲರಾದ ಕೆ.ಎಚ್‌. ಪಾಟೀಲ ಹಾಗೂ ಶಬ್ಬೀರ ಮನಿಯಾರ ಕೆಎಸ್ಸಾರ್ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ ಎಲ್‌. ಆಯ್‌. ಹಕಾಟಿ ಮೂಲಕ ಸಾರಿಗೆ ಜಿಲ್ಲಾಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಈ ವೇಳೆ ಸುರೇಶ ಉದ್ದಪ್ಪನ್ನವರ, ಮಂಜುನಾಥ ದೇವರಡ್ಡಿ, ರಂಜಾನ ಗೋಕಾಕ, ಮಹಾರುದ್ರ​‍್ಪ ಕಡಕೋಳ, ಬಸವರಾಜ ಬೆಣ್ಣಿ, ಹನಮಂತ ಕಳಸಪ್ಪನವರ, ಚಂದ್ರಶೇಖರ ಸವದತ್ತಿ, ಕಾಶೀಮಸಾಬ ಜಹಗಿರದಾರ ಇದ್ದರು.