ಗಣರಾಜ್ಯೋತ್ಸವ: ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸ್ಪರ್ಧೇ: ಬಹುಮಾನ ವಿತರಣೆ
ಬಳ್ಳಾರಿ 27: ಬಳ್ಳಾರಿ ನಗರದ ಸರಕಾರಿಕಿರಿಯ ತಾಂತ್ರಿಕ ಶಾಲೆಯಲ್ಲಿ ಒಕ್ಕೂಟ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ನಾಗರಾಜ್ ಕೆ. ಈ ರವರು ಧ್ವಜಾರೋಹಣವನ್ನು ನೇರವೇರಿಸಿ ಗಣರಾಜ್ಯೋತ್ಸವ ದಿನವನ್ನು ಒಕ್ಕೂಟ ಹಬ್ಬವಾಗಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಸ್ಪರ್ಧೇಗಳನ್ನು ಏರಿ್ಡಸಿ ಬಹುಮಾನ ವಿತರಣೆ ಮಾಡುತ್ತಿರುವುದು ತುಂಬಾ ಒಳ್ಳೇಯ ಕಾರ್ಯ, ಈ ಮೂಲಕ ಮಕ್ಕಳಿಗೆ ಧೈರ್ಯ ತುಂಬಿದಂತಾಗುತ್ತದೆ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಮನ ಪರಿವರ್ತನೆಗೆ ಸಹಕಾರಿಯಾಗಲಿದೆ.
ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಸ್ಮರಿಸುತ್ತಾತಪ್ಪದೇಎಲ್ಲರೂ ಸಂವಿಧಾನವನ್ನುಗೌರವಿಸಬೇಕು ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ನಿವೃತ್ತಅರೇ ಸೇನಾಪಡೆಯ ಸೈನಿಕರಾದ ಗವಿಸಿದ್ದಪ್ಪ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಬಿ.ಎಸ್.ಪ್ರಹ್ಲಾದ್ರೆಡ್ಡಿ ನಿವೃತ್ತ ಸೈನಿಕರು ಮಾತಾಡಿದೇಶಕ್ಕಾಗಿದುಡಿದ ಮಡಿದ ಮಹನೀಯರಜೀವನವನ್ನುಆದರ್ಶವಾಗಿಇಟ್ಟುಕೊಂಡು ಸಾಗಬೇಕಿದೆಎಂದು ತಿಳಿಸಿದರು. ಮಾಜಿ ಸೈನಿಕರನ್ನು ಕರೆಸಿ ಗೌರವಿಸುವ ಸಂಸ್ಥೆಯಕಾರ್ಯಎಲ್ಲರಿಗೂ ಮಾದರಿಎಂದು ತಿಳಿಸಿದರು ಕಾರ್ಯಕ್ರಮದ ಅತಿಥಿಗಳಾಗಿ ರಘುನಾಥ್ರಾವ್ ನಿವೃತ್ತಅಧೀಕ್ಷಕರುತಾಂತ್ರಿಕ ಶಿಕ್ಷಣ ಇಲಾಖೆ ರವರು ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಸಂಸ್ಥೆಯಅಧ್ಯಕ್ಷರಾದ ವಿನಯ್ರವರು ಮಾತಾಡಿ ಸಂವಿಧಾನದ ಬಗ್ಗೆ ಎಲ್ಲಾರಲ್ಲಿಅರಿವು ಮೂಡಿಸುವಕಾರ್ಯವಾಗಬೇಕಿದೆ, ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಜೊತೆಗೆ ಕರ್ತವ್ಯಗಳನ್ನು ಅರಿತು ಸಾಗಬೇಕಿದೆಎಂದು ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನುಗುರುಸ್ವಾಮಿ ಶಿಕ್ಷಕರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು,ಸಿಬ್ಬಂದಿ ವರ್ಗದವರು ಹಾಗೂ ಸಂಸ್ಥೆಯಕಾರ್ಯನಿರ್ವಾಹಕರಾದಕೆಂಚಪ್ಪ, ಸುರೇಶ್, ಅಜಿತ್ಕುಮಾರ್, ಜಿ.ಶಿವರಾಜ್, ಅನಿನಾಶ್, ವೀರೇಶ್,ದಕ್ಷಿಣ ಮೂರ್ತಿ,ಮಾರುತಿ, ಚಿರಂಜೀವಿ, ವೆಂಕಟೇಶ್, ಹರ್ಷವರ್ಧನ ಮತ್ತುಇತರರು ಪಾಲ್ಗೋಂಡಿದ್ದರು.