ರೆಡ್ಡಿಗಳು ವೀರಶೈವರಲ್ಲ: ಮುಖಂಡ ಪ್ರಭುಗೌಡ
Reddys are not Veerashaivas: Leader Prabhuguwa
ರೆಡ್ಡಿಗಳು ವೀರಶೈವರಲ್ಲ: ಮುಖಂಡ ಪ್ರಭುಗೌಡ
ತಾಳಿಕೋಟಿ 30: ರೆಡ್ಡಿ ಸಮಾಜದ ಜನರು ಲಿಂಗಾಯತರು ಅಲ್ಲ, ವೀರಶೈವರೂ ಅಲ್ಲ ನಾವು ಹಿಂದು ರೆಡ್ಡಿಗಳು ಆದ್ದರಿಂದ ಬರುವ ಜಾತಿಗಣತಿಯಲ್ಲಿ ಹಿಂದೂ ರೆಡ್ಡಿ ಅಂತಾ ಬರೆಯಿಸುವಂತೆ ಸಮಾಜದ ಮುಖಂಡ ಪ್ರಭುಗೌಡ ನಾಡಗೌಡ(ಶಳ್ಳಗಿ) ತಿಳಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಷ್ಟ್ರಕೂಟರ ಕಾಲದಿಂದಲೂ ಹಾಗೂ ಅದಕ್ಕಿಂತ ಹಿಂದಿನಿಂದ ನಮ್ಮ ರೆಡ್ಡಿ ಸಮುದಾಯದ ಇತಿಹಾಸವಿದೆ. ಆದರೆ ನಮ್ಮದೇ ಸಮಾಜದ ಕೆಲವರು ಯಾವುದೋ ಆಸೆ ಆಮಿಷಕ್ಕೆ ಒಳಗಾಗಿ ಕೆಲವರು ಲಿಂಗಾಯತರು ಎಂದು ಹೇಳಿಕೊಂಡರೆ ಇನ್ನೂ ಕೆಲವರು ವೀರಶೈವರೆಂದು ಹೇಳುತ್ತಾ ಹೊರಟಿದ್ದಾರೆ, ಹಿಂದು ರೆಡ್ಡಿ ಎಂದು ಜಾತಿಗಣತಿಯಲ್ಲಿ ನಮೂದಿಸಿದರೆ ಮಾತ್ರ ನಮಗೆ "ಥರ್ಡ್ ಎ" ಸೌಲಭ್ಯ ಮುಂದುವರಿಯುತ್ತದೆ. ಇದನ್ನು ಬಿಟ್ಟು ಬೇರೆಯದನ್ನು ಬರೆಯಿಸಿದರೆ ಥರ್ಡ್ ಬಿ ಸೌಲಭ್ಯಕ್ಕೆ ಹೋಗಬೇಕಾಗುತ್ತದೆ ಈ ರೀತಿ ಆಗುವುದು ಬೇಡ ಎಂದು ಸಮಾಜ ಬಾಂಧವರಿಗೆ ಮನವಿ ಮಾಡಿಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 