ಓದಿನಿಂದ ಜ್ಞಾನದ ವಿಸ್ತಾರ : ಪ್ರಭು ಸೊಪ್ಪಿನ

ಓದಿನಿಂದ ಜ್ಞಾನದ ವಿಸ್ತಾರ : ಪ್ರಭು ಸೊಪ್ಪಿನ Reading expands knowledge: Prabhu Soppina

ಓದಿನಿಂದ ಜ್ಞಾನದ ವಿಸ್ತಾರ : ಪ್ರಭು ಸೊಪ್ಪಿನ

ಲೋಕದರ್ಶನ ವರದಿ 

ಹೂವಿನಹಡಗಲಿ  03:  ನಿರಂತರ ಓದಿನಿಂದ ಜ್ಞಾನದ ವಿಸ್ತಾರ ಆಗುತ್ತದೆ ಎಂದು ಪ್ರಗತಿಪರ ಕೃಷಿಕ ಉಪನ್ಯಾಸಕ ಪ್ರಭು ಸೊಪ್ಪಿನ ಅಭಿಮತ ವ್ಯಕ್ತಪಡಿಸಿದರು.ತಾಲ್ಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ಧಮಲ್ಲಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಜ್ಞಾನದ ಹಸಿವನ್ನು ಇರಿಸಿಕೊಂಡು ತರಗತಿಗೆ ಬಂದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕತೆ ಎಂದರು.ಪ್ರಾಚಾರ್ಯರಾದ ಎಸ್‌. ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಸಿ ಸದಸ್ಯರಾದ ವಿನಯ್, ಕೊಟ್ರೇಶ್, ಸವಿತಾ, ಲಕ್ಕಪ್ಪ ಭಾಗವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಬಿ. ಕಾಳೇಶ್, ವರ್ಗಾವಣೆಗೊಂಡ ಇತಿಹಾಸ ಉಪನ್ಯಾಸಕ ದುಷ್ಯಂತ ಇವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಪನ್ಯಾಸಕರಾದ ವೆಂಕಟೇಶ್, ನರೇಶ್, ಪರಶುರಾಮ ನಾಗೋಜಿ, ಶಬೀನ, ನಟರಾಜ್, ಮಧುನಾಯ್ಕ್‌, ಶಂಕರ್, ಅಜರುದ್ದಿನ್ ಭಾಗವಹಿಸಿದ್ದರು. ಉಪನ್ಯಾಸಕ ಜಯಪ್ರಕಾಶ್ ನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು.