ಇಂದು ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಸಮಾರಂಭ

ಇಂದು ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ ಸಮಾರಂಭ  Ratnamma Heggade Women's Book Award Ceremony today

ಲೋಕದರ್ಶನ ವರದಿ 

ಧಾರವಾಡ 10: ಕರ್ನಾಟಕ ವಿದ್ಯಾವರ್ಧಕ ಸಂಘವು, ‘ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ  ದಿನಾಂಕ 11ರಂದು ಶನಿವಾರ ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ-2024’ ಪ್ರದಾನ ಸಮಾರಂಭ ಆಯೋಜಿಸಿದೆ. ದೆಹಲಿಯ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರಕುಮಾರ ಬಹುಮಾನ ಪ್ರದಾನ ಮಾಡುವರು. 

ಉಜಿರೆ ಎಸ್‌. ಡಿ. ಎಂ. ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಿ. ಸುರೇಂದ್ರಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.  ಧಾರವಾಡ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸುವರು.  ಧಾರವಾಡ ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ ಹಾಗೂ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಡಾ. ಅಜಿತ ಪ್ರಸಾದ ಉಪಸ್ಥಿತರಿರುವರು. 

ಡಾ. ವಾಯ್‌. ಎಂ. ಯಾಕೊಳ್ಳಿ-ಕವನ ಸಂಕಲನಗಳ ಕುರಿತು, ಡಾ. ಶರಣಮ್ಮ ಗೋರೇಬಾಳ-ಕಾದಂಬರಿ/ನಾಟಕ ಕುರಿತು ಹಾಗೂ ಡಾ. ಎಚ್‌. ಬಿ. ಕೋಲಕಾರ-ಕಥಾ ಸಂಕಲನ ಕುರಿತು ಮತ್ತು ಡಾ. ಶ್ರೀಧರ ಹೆಗಡೆಭದ್ರನ್‌-ಇತರೆ ಲೇಖನಗಳ ಕುರಿತು ನಿರ್ಣಾಯಕರ ಪರ ನುಡಿಗಳನ್ನಾಡುವರು.  ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.