ದಂಡಕಾರಣ್ಯದಲ್ಲಿ ಅಪರೂಪಕ್ಕೆ ಕತ್ತೆಕಿರುಬದ ದರ್ಶನ
Rare sighting of a hyena in Dandakaranya
ಕಾರವಾರ 05: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಡುಗಳಲ್ಲಿ ಅಪರೂಪಕ್ಕೆ ಕಾಣಸಿಗುವ ಕತ್ತೆಕಿರುಬದ ದರ್ಶನವಾಗಿದೆ. ಕೆಲವೇ ದಿನಗಳ ಹಿಂದೆ ಕುಳಗಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದ್ದು ಸುದ್ಧಿಯಾಗಿತ್ತು. ಆದರೆ ಈ ಹಿಂದೆ ದಾಂಡೇಲಿಯ ಕಾಡುಗಳಲ್ಲಿ ಕತ್ತೆಕಿರುಬವನ್ನು ಯಾರು ನೋಡಿದ ಬಗ್ಗೆ ಮಾಹಿತಿ ಇಲ್ಲ. ಇಲ್ಲಿಗೆ ಕತ್ತೆಕಿರುಬ ಹೇಗೆ ಬಂತು ಎನ್ನುವದು ಯಕ್ಷಪ್ರಶ್ನೆಯಾಗಿದೆ.
ಇದೀಗ ಬುಧವಾರ ಬೆಳಗಿನ ಜಾವ ಗಣೇಶ ಗುಡಿಯ ಸೇತುವೆ ಬಳಿ ಕತ್ತೆಕಿರುಬ ವೊಂದು ಕಾಣಿಸಿಕೊಂಡಿದ್ದು, ಸದ್ಯ ಮೊಬೈಲ್ ನಲ್ಲಿ ಸ್ಥಳೀಯರೊಬ್ಬರು ಸೆರೆಹಿಡಿದಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಒಂದೆಡೆ ಹುಲಿ, ಚಿರತೆಗಳ ದರ್ಶನವಾದರೆ ಇನ್ನೊಂದಡೆ ಕತ್ತೆಕಿರುಬ ಕಾಣಿಸಿಕೊಂಡಿದೆ. ಕೊಳೆತ ಪ್ರಾಣಿ ತಿಂದು ಕಾಡು ಸ್ವಚ್ಛ ಮಾಡುವ ಈ ಪ್ರಾಣಿ ಮನುಷ್ಯನಿಗೆ ತೀರಾ ಅಪಾಯಕಾರಿಯಲ್ಲ. ಆದರೆ ಜಾಗೃತೆ ಯಿಂದಿರುವದು ಒಳಿತು. ಬರಲಿರುವ ದಿನಗಳಲ್ಲಿ ಪ್ರವಾಸಿ ಪ್ರಾಣಿಪ್ರಿಯರಿಗೆ ಅಪರೂಪದ ಕತ್ತೆಕಿರುಬಗಳ ದರ್ಶನವಾಗಲೂ ಬಹುದು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 