ರಾಣೇಬೆನ್ನೂರು ಆವರಗೊಳ್ಳ ಹಿರೇಮಠ: ಕಾರ್ತಿಕ ದೀಪೋತ್ಸವ
Ranebennur Awaragolla Hiremath: Karthika Deepotsava
ರಾಣೇಬೆನ್ನೂರು:ನ 20 ಇಲ್ಲಿನ ದೊಡ್ಡಪೇಟೆಯ ಹಿರೇಮಠದ ಪಂಚಾ ಚಾರ್ಯ ಅವರಗೊಳ್ಳ ಗುರುಕಾರಣ್ಯಮಂಗಲ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಧಾರ್ಮಿಕ ವಾರ್ಷಿಕ ಸಂಪ್ರದಾಯದ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ತಿಕೋತ್ಸವದ ದಿವ್ಯ ಸಾನಿಧ್ಯವನ್ನು ಆವರಗೊಳ್ಳ ಮತ್ತು ರಾಣೆಬೆನ್ನೂರು ಹಿರೇಮಠದ ಓಂಕಾರ ಶಿವಾಚಾರ್ಯ ಮಹಾ ಸ್ವಾಮಿಗಳವರು ವಹಿಸಿ, ಕಾರ್ತಿಕೋತ್ಸವದ ಮಹತ್ವವನ್ನು ತಮ್ಮ ಸಂದೇಶಾಮೃತದಲ್ಲಿ ಭಕ್ತರಿಗೆ ನೀಡಿದರು.
ಕಾರ್ಯಕ್ರಮದ ಮುಂಚೂಣಿಯಲ್ಲಿ ಗಣ್ಯರಾದ ವಿ. ಎಸ್.ಹಿರೇಮಠ, ಎಸ್.ಸಿ. ಷಡಕ್ಷರಿಮಠ, ಸೋಮನಾಥ ಹಿರೇಮಠ, ಅಮೃತ ಗೌಡ ಹಿರೇಮಠ, ಮುಕ್ತೇಶ ಕೂರಗುಂದ ಮಠ, ಫಕ್ಕೀರೇಶ ಭಸ್ಮಾಂಗಿಮಠ, ಎಸ್.ವಿ. ಉಜ್ಜಯಿನಿಮಠ, ಜಗದೀಶ ಅಜ್ಜೋಡಿಮಠ, ಜಗದೀಶ ಮಳಿಮಠ, ಶಿವಯೋಗಿ ಹಿರೇಮಠ, ರಾಜಶೇಖರ ಬೆಳವಿಗಿ ಮಠ, ಗಣೇಶ ಬೆಲ್ಲದ, ಸುಮಂಗಲ ಹಿರೇಮಠ, ಜ್ಯೋತಿ, ಚೈತ್ರಾ ಕಿತ್ತೂರಮಠ, ಕವಿತಾ ಆರಾಧ್ಯಮಠ, ಎಮ್. ಕೆ. ಹಾಲಸ್ವಾಮಿ ಸೇರಿದಂತೆ ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ಪದಾಧಿಕಾರಿಗಳು ಧಾರ್ಮಿಕ, ಆಧ್ಯಾತ್ಮಿಕ ಕಾರ್ತಿಕ ದೀಪೋತ್ಸವದಲ್ಲಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 