ರಾಣೇಬೆನ್ನೂರು ಆವರಗೊಳ್ಳ ಹಿರೇಮಠ: ಕಾರ್ತಿಕ ದೀಪೋತ್ಸವ
Ranebennur Awaragolla Hiremath: Karthika Deepotsava
ರಾಣೇಬೆನ್ನೂರು:ನ 20 ಇಲ್ಲಿನ ದೊಡ್ಡಪೇಟೆಯ ಹಿರೇಮಠದ ಪಂಚಾ ಚಾರ್ಯ ಅವರಗೊಳ್ಳ ಗುರುಕಾರಣ್ಯಮಂಗಲ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ ಧಾರ್ಮಿಕ ವಾರ್ಷಿಕ ಸಂಪ್ರದಾಯದ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ತಿಕೋತ್ಸವದ ದಿವ್ಯ ಸಾನಿಧ್ಯವನ್ನು ಆವರಗೊಳ್ಳ ಮತ್ತು ರಾಣೆಬೆನ್ನೂರು ಹಿರೇಮಠದ ಓಂಕಾರ ಶಿವಾಚಾರ್ಯ ಮಹಾ ಸ್ವಾಮಿಗಳವರು ವಹಿಸಿ, ಕಾರ್ತಿಕೋತ್ಸವದ ಮಹತ್ವವನ್ನು ತಮ್ಮ ಸಂದೇಶಾಮೃತದಲ್ಲಿ ಭಕ್ತರಿಗೆ ನೀಡಿದರು.
ಕಾರ್ಯಕ್ರಮದ ಮುಂಚೂಣಿಯಲ್ಲಿ ಗಣ್ಯರಾದ ವಿ. ಎಸ್.ಹಿರೇಮಠ, ಎಸ್.ಸಿ. ಷಡಕ್ಷರಿಮಠ, ಸೋಮನಾಥ ಹಿರೇಮಠ, ಅಮೃತ ಗೌಡ ಹಿರೇಮಠ, ಮುಕ್ತೇಶ ಕೂರಗುಂದ ಮಠ, ಫಕ್ಕೀರೇಶ ಭಸ್ಮಾಂಗಿಮಠ, ಎಸ್.ವಿ. ಉಜ್ಜಯಿನಿಮಠ, ಜಗದೀಶ ಅಜ್ಜೋಡಿಮಠ, ಜಗದೀಶ ಮಳಿಮಠ, ಶಿವಯೋಗಿ ಹಿರೇಮಠ, ರಾಜಶೇಖರ ಬೆಳವಿಗಿ ಮಠ, ಗಣೇಶ ಬೆಲ್ಲದ, ಸುಮಂಗಲ ಹಿರೇಮಠ, ಜ್ಯೋತಿ, ಚೈತ್ರಾ ಕಿತ್ತೂರಮಠ, ಕವಿತಾ ಆರಾಧ್ಯಮಠ, ಎಮ್. ಕೆ. ಹಾಲಸ್ವಾಮಿ ಸೇರಿದಂತೆ ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ಪದಾಧಿಕಾರಿಗಳು ಧಾರ್ಮಿಕ, ಆಧ್ಯಾತ್ಮಿಕ ಕಾರ್ತಿಕ ದೀಪೋತ್ಸವದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 