ಗೋಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ: ಹಸುಗಳಿಗೆ ಪೂಜೆ, ಸಹಪಾಠಿಗಳಿಗೆ ರಾಖಿ ಕಟ್ಟಿ ಭಾವೈಕ್ಯತೆಯ ಸಂದೇಶ

ಗೋಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ: ಹಸುಗಳಿಗೆ ಪೂಜೆ, ಸಹಪಾಠಿಗಳಿಗೆ ರಾಖಿ ಕಟ್ಟಿ ಭಾವೈಕ್ಯತೆಯ ಸಂದೇಶ  Raksha Bandhan celebrations at the *Goshala*: Cows worshipped, *Rakhi* tied to classmates, and a mes

ಲೋಕದರ್ಶನ ವರದಿ 

  ಮಹಾಲಿಂಗಪುರ 28 : ಮಹಾಲಿಂಗಪುರದ ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. 10ನೇ ತರಗತಿಯ ವಿದ್ಯಾರ್ಥಿನಿಯರು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ಥಳೀಯ ಗುರು ಮಹಾಲಿಂಗೇಶ್ವರ ಗೋಶಾಲೆಗೆ ಭೇಟಿ ನೀಡಿ ಗೋಮಾತೆಗೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿನಿಯರು ಹಸುಗಳಿಗೆ ಹಣ್ಣು-ಹಂಪಲು ಹಾಗೂ ಆಹಾರ ನೀಡುವ ಮೂಲಕ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ವಿಶೇಷ ಸ್ಥಾನವನ್ನು ಪರಿಚಯಿಸುವುದರ ಜೊತೆಗೆ, ಪ್ರಾಣಿ-ಪಕ್ಷಿಗಳ ಮೇಲೆಯೂ ಪ್ರೀತಿ, ದಯೆ ಮತ್ತು ಕರುಣೆ ಹೊಂದಿರಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

ನಂತರ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಗೆ ರಾಖಿ ಕಟ್ಟಿ ಅಣ್ಣ-ತಂಗಿಯರ ಬಾಂಧವ್ಯದ ಮಹತ್ವವನ್ನು ಸ್ಮರಿಸಿದರು. ರಾಖಿ ಕೇವಲ ಒಂದು ದಾರವಲ್ಲ; ಅದು ಪ್ರೀತಿ, ವಿಶ್ವಾಸ, ರಕ್ಷಣೆ ಮತ್ತು ಆತ್ಮೀಯತೆಯ ಸಂಕೇತ ಎಂಬ ಭಾವನೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕ ಸಿದ್ಧಯ್ಯ ಮಠದ, ಶ್ರೀಶೈಲ ಮಠದ, ಮುಖ್ಯೋಪಾಧ್ಯಾಯ ಎಸ್‌.ಜಿ. ಕೌಜಲಗಿ ಹಾಗೂ ಶಿಕ್ಷಕರಾದ ಎಸ್‌.ಬಿ. ಮಠಗಾರ, ಆರಿ​‍್ಜ. ಹುಡ್ಡಾರ ಸೇರಿದಂತೆ ಇತರ ಶಿಕ್ಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ವಿನೂತನ ಹಾಗೂ ಭಾವಪೂರ್ಣ ಆಚರಣೆಯನ್ನು ಶ್ಲಾಘಿಸಿದರು.