ಸಹೋದರ- ಸಹೋದರಿಯರ ಬಾಂಧವ್ಯ ಸಾರಿದ ರಕ್ಷಾಬಂಧನ

ಸಹೋದರ- ಸಹೋದರಿಯರ ಬಾಂಧವ್ಯ ಸಾರಿದ ರಕ್ಷಾಬಂಧನ  Raksha Bandhan celebrates the bond between brothers and sisters

ಲೋಕದರ್ಶನ ವರದಿ 

ಆಲಮೇಲ 28: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಸಹೋದರ- ಸಹೋದರಿಯರಿಗೆ ಬಿ.ಕೆ. ರೇಣುಕಾ ಅಕ್ಕ ಅವರು ರಾಖಿ ಕಟ್ಟಿ, ಹಣೆಗೆ ತಿಲಕವಿಟ್ಟು ರಕ್ಷಾಬಂಧನದ ಮಹತ್ವವನ್ನು ಸಾರಿದರು.  ಬಳಿಕ ಬಾಬಾ ಅವರ ಜೀವನ ಚರಿತ್ರೆ ಹಾಗೂ ಮಹತ್ವವನ್ನು ಸ್ಮರಿಸಲಾಯಿತು. ಮಾನವನ ಜೀವನದಲ್ಲಿ ಪರಮಾತ್ಮನ ಧ್ಯಾನದಿಂದ ಶಾಂತಿ ದೊರೆಯುತ್ತದೆ. ಸ್ವಯಂ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ ಎಂದು ತಿಳಿಸಲಾಯಿತು.  ಡಾ. ಮಂಜುಷಾ ಪಾಟೀಲ, ಅಪ್ಪು ಶೆಟ್ಟಿ ಹಾಗೂ ಭಾಗ್ಯಶ್ರೀ ಅಕ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಹೋದರ- ಸಹೋದರಿಯರು ಪ್ರಸಾದ ಸ್ವೀಕರಿಸಿದರು.