ರಾಜು ದುಮಾಳೆಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನ

ರಾಜು ದುಮಾಳೆಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನ Raju Dumale honored with a letter of appreciation

ಘಟಪ್ರಭಾ 18: ಬೆಳಗಾವಿ ಜಿಲ್ಲೆಯ ಗೋಕಾಕ ಉಪವಿಭಾಗದ ಘಟಪ್ರಭಾ ಪೊಲೀಸ್ ಠಾಣೆಯ ತನಿಖಾ ಸಹಾಯಕ ಕರ್ತವ್ಯ ನಿರ್ವಹಿಸುತ್ತಿರುವ(ಸಿ.ಪಿ.ಸಿ) ಪೊಲೀಸ್ ಕಾನ್ಸ್ಟೆಬಲ್ ರಾಜು ದುಮಾಳೆ ಅವರು 01ಪ್ರಕರಣದಲ್ಲಿ ಅಪರಿಚಿತ ಶವದ ಬಗ್ಗೆ ವಿಚಾರಣೆ ಮಾಡಿ ಅದು ಕೊಲೆ ಪ್ರಕರಣವೆಂದು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರವನ್ನು  ವಹಿಸಿದನ್ನು ಗುರುತಿಸಿ ನಿಮ್ಮ ಕರ್ತವ್ಯವು ಶ್ಲಾಘನೀಯವಾಗಿದೆ ಎಂದು ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಎಸ್ ಗುಳೇದ ರವರು ಮೆಚ್ಚುಗೆಯ ವ್ಯಕ್ತಪಡಿಸಿದ್ದಾರೆ.ಅವರ ಕರ್ತವ್ಯವನ್ನು  ಮನಪೂರ್ವಕ ಅಭಿಂನಂದಿಸಿ ಹಾಗೂ ತುಂಬು ಹೃದಯದಿಂದ ಶ್ಲಾಘಿಸಿ ಮುಂದೆಯೂ ಸಹ ನೀವು ಇದೇ ರೀತಿ ಕರ್ತವ್ಯವನ್ನು ನಿರ್ವಹಿಸುಕೊಂಡು ಬರುತ್ತಾರೆಂದು ಹಾರೈಸಿ ಪ್ರಂಶಸನಾ ಪತ್ರ ನೀಡಿ ಗೌರವಿಸಿದ್ದಾರೆ.